Advertisement

ದಾಲ್‌ಮಿಲ್‌ ಸಾಲ: ಒಟಿಎಸ್‌ಗೆ ಮನವಿ

11:45 AM Feb 22, 2022 | Team Udayavani |

ಕಲಬುರಗಿ: ವಿವಿಧ ಬ್ಯಾಂಕ್‌ಗಳು ಹಾಗೂ ಕೆಎಸ್‌ಎಫ್ ಸಿಯಿಂದ ದಾಲ್‌ಮಿಲ್‌ ಮೇಲೆ ಪಡೆಯಲಾದ ಸಾಲವನ್ನು ಉದ್ಯಮ ನಷ್ಟದ ಹಿನ್ನೆಲೆಯಲ್ಲಿ ಕಟ್ಟಲಿಕ್ಕಾಗದ ಹಿನ್ನೆಲೆಯಲ್ಲಿ ಒನ್‌ ಟೈಂ ಸೆಟ್ಲಮೆಂಟ್‌ (ಒಟಿಎಸ್‌) ಮಾಡುವಂತೆ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿದೆ.

Advertisement

ಜಿಲ್ಲೆಯಲ್ಲಿ 300ಕ್ಕೂ ಅಧಿಕ ಉದ್ಯಮಗಳು ಸಾಲದ ಮೇಲಿನ ಹೊರೆಯಿಂದ ತತ್ತರಿಸಿದ್ದು, ಬಂದ್‌ ಆಗಿವೆ. ಹೀಗಾಗಿ ಉದ್ಯಮ ನಡೆಸಿಕೊಂಡು ಹೋಗುವಂತಾಗಲು ಒಟಿಎಸ್‌ಗೆ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ ನೇತೃತ್ವದಲ್ಲಿ ಎಚ್‌ಕೆಸಿಸಿಐ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಪ್ರಮುಖವಾಗಿ ದಾಲ್‌ಮಿಲ್‌ಗ‌ಳಿಗೆ ಬಡ್ಡಿ ರಿಯಾಯ್ತಿ ಸೌಲಭ್ಯವನ್ನು ದಾಲ್‌ಮಿಲ್‌ಗ‌ಳಿಗೂ ವಿಸ್ತರಿಸಬೇಕು. ಹೀಗಾದಲ್ಲಿ ದಾಲ್‌ಮಿಲ್‌ಗ‌ಳು ಪುನಶ್ಚೇತನಗೊಳ್ಳಲು ಸಾಧ್ಯವಾಗುತ್ತದೆ. ಕಲ್ಯಾಣ ಕರ್ನಾಟಕದ ಬಗ್ಗೆ ಕಾಳಜಿ ಹೊಂದಿದ್ದರಿಂದ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿಯಲ್ಲಿ ತಿಳಿಸಲಾಗಿದೆ. ಪ್ರಮುಖರಾದ ಬಸವರಾಜ ಜೋಗುರ, ನೀಲಕಂಠ ಬಿರಾದಾರ, ಶಶಿಕಾಂತ ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next