Advertisement

Temple; ತಮಟೆ ಬಾರಿಸಲು ಹೋಗದ್ದಕ್ಕೆ ದಲಿತರಿಗೆ ಬಹಿಷ್ಕಾರ!

01:26 AM Jul 19, 2024 | Team Udayavani |

ಡೆಹ್ರಾಡೂನ್‌: ಅನಾರೋಗ್ಯದ ಹಿನ್ನೆಲೆಯಲ್ಲಿ ದೇಗುಲದೆದುರು ತಮಟೆ ಬಾರಿಸಲು ಹೋಗದ ಕಾರಣಕ್ಕೆ ಉತ್ತರಾಖಂಡದ ಗ್ರಾಮವೊಂದರಲ್ಲಿ ದಲಿತ ಕುಟುಂಬಗಳಿಗೆ ಬಹಿಷ್ಕಾರ ಹೇರಲಾಗಿದೆ. ಚಮೋಲಿ ಜಿಲ್ಲೆಯ ಸುಭಾಯಿಯಲ್ಲಿರುವ 6 ದಲಿತ ಕುಟುಂಬ ಗಳೇ ಗ್ರಾಮದ ಎಲ್ಲ ಸಾಮಾಜಿಕ, ಧಾರ್ಮಿಕ ಸಮಾರಂಭಗಳಿಗೆ ತಮಟೆ ಬಾರಿಸುವ ಸಂಪ್ರದಾಯ ವಿತ್ತು. ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ತಮಟೆ ಬಾರಿಸಲು ಕೇಳಿದಾಗ ಪುಷ್ಕರ್‌ ಲಾಲ್‌ ಎಂಬ ದಲಿತ ಅನಾರೋಗ್ಯವಿದ್ದ ಕಾರಣ ಬರಲು ನಿರಾಕರಿಸಿದ್ದಾರೆ. ಹೀಗಾಗಿ ಸ್ಥಳೀಯ ಪಂಚಾಯತ್‌ ಇಡೀ ಸಮುದಾಯವನ್ನು ಬಹಿಷ್ಕರಿಸಿದೆ. ಇವರು ಕಾಡು, ಊರಿನ ನೀರು, ವಾಹನ ಬಳಸಬಾರದು, ಊರಿನ ಒಳಗೆ ಅಗತ್ಯ ವಸ್ತುಗಳನ್ನೂ ಖರೀದಿಸಬಾರದು ಎಂದು ನಿರ್ಬಂಧಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next