Advertisement

ಮಂಗಳಾ ಸ್ಟೇಡಿಯಂ ಬಳಿ ಮರಕ್ಕೆ ಕೊಡಲಿಯೇಟು; ಆಕ್ಷೇಪ

11:08 AM Jul 06, 2018 | Team Udayavani |

ಮಹಾನಗರ: ನಗರದ ಮಂಗಳಾ ಸ್ಟೇಡಿಯಂ ಹಾಗೂ ವಾಲಿಬಾಲ್‌ ಕೋರ್ಟ್‌ ನಡುವೆ ಇದ್ದ ಸುಮಾರು 7ರಿಂದ 10
ಬೃಹದಾಕಾರದ ಮರಗಳನ್ನು ಅರಣ್ಯ ಇಲಾಖೆ ಅನುಮತಿ ಇಲ್ಲದೆ ರಾತೋರಾತ್ರಿ ಕಡಿದು ಹಾಕಿದ ಹಿನ್ನೆಲೆಯಲ್ಲಿ ಪರಿಸರವಾದಿ ಸಂಘಟನೆಯ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಈ ಬಗ್ಗೆ ಪರಿಸರವಾದಿ ದಿನೇಶ್‌ ಹೊಳ್ಳ ಅವರು ಪ್ರತಿಕ್ರಿಯಿಸಿ, ಮೈದಾನದ ಸಮೀಪದಲ್ಲಿದ್ದ ವಾಲಿಬಾಲ್‌ ಕೋರ್ಟ್‌ನಲ್ಲಿ ಕ್ರೀಡಾಳುಗಳ ಅಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಮರದ ಗೆಲ್ಲುಗಳನ್ನು ಕಡಿಯಲು ಅನುಮತಿ ನೀಡಿದ್ದಾರಂತೆ. ಅರಣ್ಯಾಧಿಕಾರಿ ಅವರನ್ನು ಸಂಪರ್ಕಿಸಿದರೆ ಮರ ಕಡಿದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸಾಬೂಬು ನೀಡುತ್ತಾರೆ ಎಂದು ತಿಳಿಸಿದ್ದಾರೆ.

ಎನ್‌ಇಸಿಎಫ್‌ ಮಂಗಳೂರು ಕಾರ್ಯ ದರ್ಶಿ ಶಶಿಧರ್‌ ಶೆಟ್ಟಿ ಅವರು ಮರ ಕಡಿದ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಅರಣ್ಯ ಇಲಾಖೆಯ ನಡೆಗೆ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next