Advertisement

Bijapur: ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ಸಿಡಿಲು ಬಡಿದು ಸಿಆರ್ ಪಿಎಫ್ ಯೋಧ ಮೃ*ತ್ಯು

07:20 PM Sep 05, 2024 | Team Udayavani |

ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಗುರುವಾರ(ಸೆ 5) ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ಸಿಡಿಲು ಬಡಿದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) 23 ವರ್ಷದ ಯೋಧ ಮೃತಪಟ್ಟಿದ್ದಾರೆ.

Advertisement

ಸಿಆರ್‌ಪಿಎಫ್‌ನ 85 ನೇ ಬೆಟಾಲಿಯನ್‌ನ ಕವಡ್‌ಗಾಂವ್ ಕ್ಯಾಂಪ್‌ನಿಂದ ಪಕ್ಕದ ಪ್ರದೇಶಗಳಲ್ಲಿ ಬೆಳಗ್ಗೆ ಕಾರ್ಯಾಚರಣೆಗೆ ಹೊರಟಾಗ ಕಾನ್‌ಸ್ಟೆಬಲ್ ಕಮಲೇಶ್ ಹೇಮ್ಲಾ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಗಸ್ತು ತಿರುಗುತ್ತಿದ್ದಾಗ ಮಳೆ ಸುರಿಯಲಾರಂಭಿಸಿದ್ದು ಈ ವೇಳೆ ಸಿಡಿಲು ಬಡಿದು ಹೇಮ್ಲಾ ಗಾಯಗೊಂಡರು.ಅವರನ್ನು ಬಿಜಾಪುರದ ಆಸ್ಪತ್ರೆಗೆ ಸಾಗಿಸುವಾಗ ಅವರು ಕೊನೆಯುಸಿರೆಳೆದರು ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next