Advertisement

ಗಡಿಯಾಚೆ ಅಣ್ಣ-ತಂಗಿಯರ ಸಂಗಮ!

10:00 AM Nov 28, 2018 | Team Udayavani |

ಹೊಸದಿಲ್ಲಿ: ಸಿಕ್ಖ್ ಸಮುದಾಯ ಗುರು ನಾನಕ್‌ ಅವರ 550ನೇ ಜನ್ಮ ದಿನದ ಸಂಭ್ರಮದಲ್ಲಿದ್ದರೆ, ಇತ್ತ ಗಡಿಯಲ್ಲಿ ಪಂಜಾಬ್‌ನ ಸಿಕ್ಖ್ ವ್ಯಕ್ತಿಯೊಬ್ಬರು ಬರೋಬ್ಬರಿ 71 ವರ್ಷಗಳ ಬಳಿಕ ತಮ್ಮಿಬ್ಬರು ಮುಸ್ಲಿಂ ಸಹೋದರಿಯರನ್ನು ಭೇಟಿ ಮಾಡಿ ಖುಷಿಪಟ್ಟರು. ಈ ಭಾವನಾತ್ಮಕ ಕ್ಷಣಕ್ಕೆ ಭಾರತ-ಪಾಕಿಸ್ಥಾನ ಗಡಿ ಸಾಕ್ಷಿಯಾಯಿತು. ಸರ್ದಾರ್‌ ಬಯಾಂತ್‌ ಸಿಂಗ್‌ ಎಂಬವರೇ ತಮ್ಮ ಸೋದರಿಯರನ್ನು ಕೂಡಿಕೊಂಡ ವ್ಯಕ್ತಿ.

Advertisement

ಭಾರತ ವಿಭಜನೆ ವೇಳೆ ಈ ಇಬ್ಬರು ಸೋದರಿಯರಿಂದ ಸರ್ದಾರ್‌ ಬೇರ್ಪಟ್ಟಿ ದ್ದರು. ಭಾನುವಾರ ಪಾಕ್‌ನ ಪಂಜಾಬ್‌ ಪ್ರಾಂತ್ಯದಲ್ಲಿನ ನನ್‌ಕಾನಾ ಸಾಹಿಬ್‌ನ ಗುರುದ್ವಾರಕ್ಕೆ ಇಬ್ಬರು ಸಹೋದರಿಯರಾದ ಉಲ#ತ್‌ ಮತ್ತು ಮೈರಾಜ್‌ ಬೀಬಿ ಆಗಮಿಸಿದ್ದು, ಅದೇ ವೇಳೆ ಸರ್ದಾರ್‌ ಕೂಡ ಅಲ್ಲೇ ಇದ್ದು, ಸುದೀರ್ಘ‌ ಕಾಲ ಸಂಪರ್ಕದಿಂದ ದೂರವಿದ್ದ ಕುಟುಂಬ ಒಂದಾಯಿತು.

ಬಯಾಂತ್‌ ತಾಯಿ ಪಕ್ಕದ ಮನೆಯ ಮಹಿಳೆ ಜತೆ ಇಟ್ಟುಕೊಂಡಿದ್ದ ಸಂಪರ್ಕ ದಿಂದಾಗಿ ಮತ್ತೆ ಒಂದಾಗಲು ಸಾಧ್ಯವಾಗಿದೆ. ಈಗ ಇಬ್ಬರು ಸಹೋದರಿಯರು ಬಯಾಂತ್‌ ಅವರಿಗೆ ಪಾಕಿಸ್ಥಾನದ ಪೌರತ್ವ ನೀಡುವಂತೆ ಪಾಕ್‌ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇಲ್ಲದಿದ್ದರೆ ವೀಸಾ ಅವಧಿ ವಿಸ್ತರಿಸುವಂತೆ ಕೋರಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next