Advertisement

ಉಪ್ಪಿನಂಗಡಿ ಪಂಜಳ: ನೇತ್ರಾವತಿಯಲ್ಲಿ 3 ಮೊಸಳೆ ಪತ್ತೆ! ಸ್ಥಳೀಯರಲ್ಲಿ ಆತಂಕ

08:11 AM Sep 20, 2022 | Team Udayavani |

ಉಪ್ಪಿನಂಗಡಿ : ಇಲ್ಲಿನ ಪಂಜಳದಲ್ಲಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ನೇತ್ರಾವತಿ ನದಿಯಲ್ಲಿ ಮೂರು ಮೊಸಳೆಗಳು ಕಂಡು ಬಂದಿದ್ದು, ಸ್ಥಳೀಯ ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.

Advertisement

ಪೆಟ್ರೋಲ್‌ ಬಂಕ್‌ ಸನಿಹದಲ್ಲೇ ಅವು ಕಂಡುಬಂದಿವೆ. ಮಧ್ಯಾಹ್ನದ ವೇಳೆಗೆ ನದಿಯ ಮಧ್ಯದಲ್ಲಿ ಕುರುಚಲು ಕಾಡು ಬೆಳೆದಿರುವ ಮರಳ ದಿಬ್ಬದ ಮೇಲೆ ಅವುಗಳು ಓಡಾಡುತ್ತಿದ್ದವು.

ಒಂದು ಮೊಸಳೆ ದೊಡ್ಡ ಗಾತ್ರದ್ದಾದರೆ, ಮತ್ತೆರಡು ಸ್ವಲ್ಪ ಸಣ್ಣ ಗಾತ್ರದವಾಗಿದ್ದವು ಎಂದು ಪ್ರತ್ಯಕ್ಷದರ್ಶಿ ಸಿದ್ದಿಕ್‌ ಕೊಪ್ಪಳ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಟಿ20 ವಿಶ್ವಕಪ್‌ಗೆ ಸಿದ್ಧತೆ; ಭಾರತ-ಆಸ್ಟ್ರೇಲಿಯ ಟಿ20 ಸರಣಿ ಇಂದಿನಿಂದ

Advertisement

Udayavani is now on Telegram. Click here to join our channel and stay updated with the latest news.

Next