Advertisement

Crime News; ಪುತ್ತೂರು-ಸುಳ್ಯ ಭಾಗದ ಅಪರಾಧ ಸುದ್ದಿಗಳು

12:59 AM Apr 21, 2024 | Team Udayavani |

ಸುಳ್ಯ: ಕಾರುಗಳ ನಡುವೆ ಅಪಘಾತ
ಸುಳ್ಯ: ಎರಡು ಕಾರುಗಳ ಮುಖಾಮುಖೀ ಢಿಕ್ಕಿ ಉಂಟಾಗಿ ಪ್ರಯಾಣಿಕರು ಸಣ್ಣ-ಪುಟ್ಟ ಗಾಯ ಗೊಂಡ ಘಟನೆ ಶನಿವಾರ ಸುಳ್ಯದಲ್ಲಿ ಸಂಭವಿಸಿದೆ.

Advertisement

ಸುಳ್ಯ ಶ್ರೀರಾಮ್‌ ಪೇಟೆಯ ಪೋಸ್ಟ್‌ ಆಫೀಸ್‌ ಬಳಿ ಆಮ್ನಿ ಕಾರು ಹಾಗೂ ಸೆಲಾರಿಯೋ ಕಾರು ನಡುವೆ ಢಿಕ್ಕಿ ಸಂಭವಿಸಿದ್ದು, ಎರಡು ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣ-ಪುಟ್ಟ ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕೆಲ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ರಸ್ತೆ ತಡೆಬೇಲಿಗೆ ವಾಹನ ಢಿಕ್ಕಿ
ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ತಡೆಬೇಲಿಗೆ ವಾಹನವೊಂದು ಢಿಕ್ಕಿಯಾದ ಘಟನೆ ಎ. 18ರ ರಾತ್ರಿ ಮಾಣಿ-ಮೈಸೂರು ಹೆದ್ದಾರಿಯ ಸುಳ್ಯದ ಮೊಗರ್ಪಣೆಯಲ್ಲಿ ಸಂಭವಿಸಿದೆ.

ಮೈಸೂರಿನಿಂದ ಮಂಗಳೂರಿಗೆ ಬಾಳೆಎಲೆ ಸಾಗಿಸುತ್ತಿದ್ದ ಅಶೋಕ್‌ ಲೈಲ್ಯಾಂಡ್‌ ದೋಸ್ತ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಬೇಲಿಗೆ ಢಿಕ್ಕಿಯಾಗಿದ್ದು, ಪರಿಣಾಮ ವಾಹನದ ಮುಂಭಾಗ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್‌ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ರಸ್ತೆ ಬದಿ ನಿಲ್ಲಿಸಿದ್ದ‌ ವಾಹನಗಳಿಗೆ ಢಿಕ್ಕಿ
ಪುತ್ತೂರು: ಪುತ್ತೂರಿನಿಂದ ದರ್ಬೆ ಕಡೆಗೆ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಢಿಕ್ಕಿ ಹೊಡೆದ ಘಟನೆ ದರ್ಬೆಯಲ್ಲಿ ಸಂಭವಿಸಿದೆ. ಕೆಮ್ಮಾಯಿಯ ವ್ಯಕ್ತಿಯೋರ್ವ ಚಲಾಯಿಸುತ್ತಿದ್ದು ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೂರು ಸ್ಕೂಟರ್‌, ಸಾಮೆತ್ತಡ್ಕದ ವ್ಯಕ್ತಿಗೆ ಢಿಕ್ಕಿ ಹೊಡೆದಿದೆ.

Advertisement

ಯುವಕ ಆತ್ಮಹತ್ಯೆ
ಪುತ್ತೂರು: ಮುಕ್ವೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎ. 19ರಂದು ಬೆಳಕಿಗೆ ಬಂದಿದೆ. ತುಂಬೆ ರಾಮಲ್‌ ಕಟ್ಟೆ ಮೂಲದ ಸುಮನ್‌ ರಾಜ್‌ (23) ಮೃತ ವ್ಯಕ್ತಿ. ಮೂಲತಃ ಕೇರಳದವರಾಗಿದ್ದ ಅವರು ಕಾರ್ಯಕ್ರಮದ ಕಲಾವಿದರಾಗಿ ಮುಕ್ವೆಗೆ ಆಗಮಿಸಿದ್ದು, ಕಾರ್ಯಕ್ರಮ ನಡೆಯುವ ಸ್ಥಳದ ಪಕ್ಕದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next