Advertisement

ಅಮಾನತಾಗಿದ್ದ ಬಿಜೆಪಿ ಸಂಸದ ಕೀರ್ತಿ ಆಜಾದ್‌ ಕಾಂಗ್ರೆಸ್‌ ಪಕ್ಷಕ್ಕೆ

07:15 AM Feb 18, 2019 | Team Udayavani |

ಹೊಸದಿಲ್ಲಿ : ಆಳುವ ಬಿಜೆಪಿ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಕ್ಕಾಗಿ ಆಮಾನತುಗೊಂಡಿದ್ದ ದರ್ಭಾಂಗ ಸಂಸದ ಕೀರ್ತಿ ಆಜಾದ್‌ ಇಂದು ಸೋಮವಾರ ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ.

Advertisement

ಮಾಜಿ ಕ್ರಿಕೆಟಿಗ ಹಾಗೂ 1983ರ ವಿಶ್ವ ಕಪ್‌ ಕ್ರಿಕೆಟ್‌ ಗೆದ್ದಿದ್ದ ಭಾರತ ತಂಡದ ಓರ್ವ ಆಟಗಾರರಾಗಿದ್ದ ಕೀರ್ತಿ ಆಜಾದ್‌ ಅವರು ಇಂದು ಬೆಳಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಯಾದರು. ಅಂತೆಯೇ ಅವರನ್ನು ರಾಹಲ್‌, ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಂಡರು. 

“ಇಂದು ನಾನು ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷ ಸೇರಿದ್ದೇನೆ; ನಾನು ಅವರನ್ನು ಮೈಥಿಲಿ ಶೈಲಿಯಲ್ಲಿ ಅಭಿನಂದಿಸಿದ್ದೇನೆ’ ಎಂದು ಕೀರ್ತಿ ಆಜಾದ್‌ ಟ್ವೀಟ್‌ ಮಾಡಿದ್ದಾರೆ. ಜತೆಗೆ ಕಾಂಗ್ರೆಸ್‌ ಅಧ್ಯಕ್ಷರ ಜತೆಗಿನ ತನ್ನ ಫೋಟೋಗಳನ್ನು ಹಾಕಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next