Advertisement

Mysuru Dasara ವೇದಿಕೆ ರಾಜಕೀಯಕ್ಕೆ ಸಲ್ಲ: ಛಲವಾದಿ ನಾರಾಯಣ ಸ್ವಾಮಿ ಕಿಡಿ

12:25 AM Oct 04, 2024 | Team Udayavani |

ಯಾದಗಿರಿ: ”ರಾಜ್ಯದಲ್ಲಿಯೂ ಕಾಂಗ್ರೆಸ್ ಪಕ್ಷ ಹತಾಶೆಯ ಸ್ಥಿತಿಯಲ್ಲಿದ್ದು ದಸರಾ ಹಬ್ಬದ ವೇದಿಕೆಯನ್ನು ಸಹ ಮುಖ್ಯಮಂತ್ರಿಗಳು ರಾಜಕೀಯ ಭಾಷಣದ ವೇದಿಕೆಯಾಗಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ” ಎಂದು ವಿಧಾನ‌ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ‌ ನಾರಾಯಣ ಸ್ವಾಮಿ ಗುರುವಾರ(ಅ3) ಹೇಳಿದರು.

Advertisement

ನಗರಸಭೆ ಚುನಾವಣೆ ನಂತರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಡಹಬ್ಬದ ವೇದಿಕೆಯನ್ನು ರಾಜಕೀಯಕ್ಕೆ ಯಾರೂ ಬಳಸಿಕೊಳ್ಳಬಾರದು ಎಂದು ಆಗ್ರಹಿಸಿದ ಅವರು ಮುಖ್ಯಮಂತ್ರಿಗಳು ಸಹ ದಸರಾ ವೇದಿಕೆಯಲ್ಲಿ ರಾಜಕೀಯ ಮಾತನಾಡಿರುವುದನ್ನು ಖಂಡಿಸುವುದಾಗಿ ಹೇಳಿದರು.

ಜಿಟಿ ದೇವೇಗೌಡ ಮಾತಿಗೂ ಅವರು ಯಾರೇ ಆಗಲಿ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳಬಾರದು ಅದೊಂದು ಸಾಂಸ್ಕೃತಿಕ ಹಬ್ಬದ ವೇದಿಕೆ ಎಂದು ಅವರು ಹೇಳಿದರು.

ಮೈಸೂರು ಜನತೆ ಹಾಗೂ ದಸರಾ ಪ್ರಿಯರು ಇದನ್ನು ಒಪ್ಪುವುದಿಲ್ಲ‌ ರಾಜಕೀಯ ಬೇರೆ, ದಸರಾ ಹಬ್ಬದ ವೇದಿಕೆ ಬೇರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next