Advertisement

ಕೋವಿಡ್ ಇಳಿಯುತ್ತಿದೆ; ಆದರೂ ಎಚ್ಚರ ತಪ್ಪದಿರಿ; ಕೇರಳ, ಮಿಜೋರಾಂನಲ್ಲಿ ಏರಿಕೆ

03:36 PM Feb 11, 2022 | Team Udayavani |

ಹೊಸದಿಲ್ಲಿ: ದೇಶದಲ್ಲಿ ಕೇರಳ ಮತ್ತು ಮಿಜೋರಾಂ ಬಿಟ್ಟು ಬೇರೆಲ್ಲ ರಾಜ್ಯಗ ಳಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿದೆ. ಆದರೂ ಎಚ್ಚರ ಮರೆಯು ವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗ ಸದಸ್ಯ ಡಾ| ವಿ.ಕೆ. ಪೌಲ್‌, “40 ಜಿಲ್ಲೆಗಳಲ್ಲಿ ವಾರದ ಪಾಸಿ ಟಿವಿಟಿ ಪ್ರಮಾಣದಲ್ಲಿ ಈಗಲೂ ಏರಿಕೆ ಯಾಗುತ್ತಿದೆ. ದೈನಂದಿನ ಪಾಸಿಟಿವಿಟಿ ಪ್ರಮಾಣ ಕೇರಳದಲ್ಲಿ ಶೇ.29.57, ಮಿಜೋರಾಂನಲ್ಲಿ ಶೇ.26.5 ಇದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವಂತೆ ಸೋಂಕು ಅಂತ್ಯವಾಗಿಲ್ಲ. ಹಾಗಾಗಿ ಎಚ್ಚರಿಕೆ ಮರೆಯಬಾರದು’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಪದವಿ ಸೆಮಿಸ್ಟರ್‌ ಪರೀಕ್ಷೆ ಒಂದು ತಿಂಗಳ ಕಾಲ ಮುಂದೂಡಲು ಮನವಿ

ದೇಶದಲ್ಲಿ ಜ.24ಕ್ಕೆ ಶೇ.20.75 ಇದ್ದ ಪಾಸಿಟಿವಿಟಿ ಪ್ರಮಾಣ ಈಗ ಶೇ.4.44ಕ್ಕೆ ಇಳಿದಿದೆ. ಕೇರಳ, ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕ 50,000ಕ್ಕೂ ಅಧಿಕ ಸಕ್ರಿಯ ಪ್ರಕರಣ ಗಳನ್ನು ವರದಿ ಮಾಡುತ್ತಿವೆ ಹಾಗೂ ದೇಶದ ಒಟ್ಟಾರೆ ಸಕ್ರಿಯ ಪ್ರಕರಣಗಳ ಪೈಕಿ ಶೇ.61.25 ಪ್ರಕರಣ ಇದೇ ನಾಲ್ಕು ರಾಜ್ಯಗಳಲ್ಲಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ದೇಶದಲ್ಲಿ ಬುಧವಾರ ಬೆಳಗ್ಗೆಯಿಂದ ಗುರುವಾರ ಬೆಳಗ್ಗೆವರೆಗೆ 67,084 ಕೊರೊನಾ ಪ್ರಕರಣ ದೃಢವಾ ಗಿದೆ. 1,241 ಮಂದಿ ಸಾವನ್ನಪ್ಪಿದ್ದು ಒಟ್ಟಾರೆ ಮೃತರ ಸಂಖ್ಯೆ 5,06,520ಕ್ಕೆ ಏರಿದೆ.

Advertisement

Udayavani is now on Telegram. Click here to join our channel and stay updated with the latest news.

Next