Advertisement

ಮತ್ತೆ 114 ಜನರಿಗೆ ಸೋಂಕು ದೃಢ

03:46 PM Aug 21, 2020 | Suhan S |

ಗದಗ: ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 114 ಜನರಿಗೆ ಕೋವಿಡ್‌ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 3,604ಕ್ಕೆ ಏರಿಕೆಯಾಗಿವೆ. ಈ ಪೈಕಿ ಒಟ್ಟು 2456 ಜನರು ಗುಣಮುಖರಾಗಿದ್ದು, 1086 ಜನರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ವೀರನಾರಾಯಣ ದೇವಸ್ಥಾನದ ಹತ್ತಿರ, ವಕ್ಕಲಗೇರಿ ಓಣಿ, ಸಾಲ ಓಣಿ, ಶರಣಬಸವೇಶ್ವರ ನಗರ, ಟೆಂಗಿನಕಾಯಿ ಬಜಾರ, ಬನಶಂಕರಿ ಬಡಾವಣೆ, ಅಂಬಾಭವಾನಿ ದೇವಸ್ಥಾನ ಹತ್ತಿರ, ಕಳಸಾಪುರ, ಕಟಗೇರಿ ಓಣಿ, ಹುಡ್ಕೊà ಕಾಲೋನಿ, ಕೆಎಚ್‌ಬಿ ಕಾಲೋನಿ, ಟರ್ನಲ್‌ ಪೇಟ, ಮುಳಗುಂದ ನಾಕಾ, ಪುಟ್ಟರಾಜ ನಗರ, ನೇಕಾರ ಕಾಲನಿ, ರಂಗಪ್ಪಜ್ಜನ ಮಠದ ಹತ್ತಿರ, ವಕೀಲ ಚಾಳ, ಅಬ್ಬಿಗೇರಿ ಕಾಂಪೌಂಡ್‌, ಗಂಜಿ ಬಸವೇಶ್ವರ ವೃತ್ತ, ಜಿಲ್ಲಾ ಕ್ರೀಡಾಂಗಣದ ಹತ್ತಿರ, ಪಂಚಾಕ್ಷರಿ ನಗರ, ಗೌಡರ ಓಣಿ, ಸಿದ್ಧಲಿಂಗ ನಗರ, ಆರ್‌.ಕೆ. ನಗರ, ಖಾನತೋಟ, ಜಿಲ್ಲಾ ಸಮೀಕ್ಷಣಾ ಧಿಕಾರಿಗಳ ಕಚೇರಿ, ಗದಗ ತಾಲೂಕಿನ ಹುಲಕೋಟಿ, ಚಿಂಚಲಿ, ಮಲ್ಲಸಮುದ್ರ, ಮುಳಗುಂದ, ಬಿಂಕದಕಟ್ಟಿ, ನೀರಲಗಿಯಲ್ಲಿ ಸೋಂಕು ದೃಢಪಟ್ಟಿದೆ.

ನರಗುಂದ ಪಟ್ಟಣದ ಕಸಬಾ ನರಗುಂದ, ಎನ್‌ಎಚ್‌ಟಿ ಮಿಲ್‌, ಶಿರೋಳ ಆಸ್ಪತ್ರೆ ಹತ್ತಿರ, ನರಗುಂದ ತಾಲೂಕಿನ ಕೊಣ್ಣೂರ, ಶಿರೋಳ, ರೋಣ ಪಟ್ಟಣದ ಸಿಂಡಿಕೇಟ್‌ ಬ್ಯಾಂಕ್‌ ಹತ್ತಿರ, ರೋಣ ತಾಲೂಕಿನ ಯಾವಗಲ್‌, ಹೊಳೆಆಲೂರ, ಮೆಣಸಗಿ, ಬೆಳವಣಕಿ, ಮುಶಿಗೇರಿ, ಹಿರೇಮಣ್ಣೂರ, ಶಿರಹಟ್ಟಿ, ಶಿರಹಟ್ಟಿ ಪಟ್ಟಣದ ನವನಗರ, ಲಕ್ಷ್ಮೇಶ್ವರ ಪಟ್ಟಣದ ಬಸ್ತಿ ಬಣ, ಮುಂಡರಗಿ ಪಟ್ಟಣದ ಎ.ಬಿ. ನಗರ, ತಾಲೂಕಿನ ಯಕ್ಲಾಸಪುರ, ಕಲಕೇರಿ, ಡಂಬಳ, ಹಮ್ಮಗಿ, ಬರದೂರ, ಬೂದಿಹಾಳ, ಗಜೇಂದ್ರಗಡ ಹಿರೇಮನಿ ಪ್ಲಾಟ್‌ ನಿವಾಸಿಗಳಿಗೆ ಸೋಂಕು ತಗುಲಿದೆ.

ಮೂವರು ಬಲಿ: ಗದಗ-ಬೆಟಗೇರಿ ನಿವಾಸಿ 45 ವರ್ಷದ ವ್ಯಕ್ತಿ (ಪಿ-241910), 84 ವರ್ಷದ ವೃದ್ಧ (ಪಿ-236043) ,ಕೊಪ್ಪಳದಗೊರಲ್ಲಕೊಪ್ಪ ನಿವಾಸಿ 68 ವರ್ಷದ ಮಹಿಳೆ(ಪಿ-231282) ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next