Advertisement

ಉದ್ಧವ್‌ ಠಾಕ್ರೆಗೆ ಮತ್ತೊಂದು ಸವಾಲೆಸೆದ ನವನೀತ್‌ ಕೌರ್‌

08:28 PM May 08, 2022 | Team Udayavani |

ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಅವರ ಮನೆ ಮುಂದೆ ಹನುಮಾನ್‌ ಚಾಲೀಸ ಪಠಿಸುವುದಾಗಿ ಸವಾಲೆಸೆದು, ಬಂಧಿತರಾಗಿ, ಈಗ ಜೈಲಿನಿಂದ ಹೊರಬಂದಿರುವ ಸಂಸದೆ ನವನೀತ್‌ ಕೌರ್‌ ಸಿಎಂಗೆ ಮತ್ತೊಂದು ಸವಾಲೆಸೆದಿದ್ದಾರೆ.

Advertisement

“ತಾಕತ್ತಿದ್ದರೆ ಚುನಾವಣೆಯಲ್ಲಿ ನನ್ನೆದುರು ನಿಂತು ಗೆದ್ದು ತೋರಿಸಿ’ ಎಂದು ಸವಾಲು ಹಾಕಿದ್ದಾರೆ.

“ಉದ್ಧವ್‌ ಅವರು ಯಾವುದಾದರೂ ಕ್ಷೇತ್ರದಲ್ಲಿ ನಿಲ್ಲಲಿ. ನಾನೂ ಅದೇ ಕ್ಷೇತ್ರದಲ್ಲಿ ನಿಲ್ಲುತ್ತೇನೆ. ಶ್ರಮ ಮತ್ತು ಪ್ರಾಮಾಣಿಕವಾಗಿ ದುಡಿದು ಗೆಲ್ಲುತ್ತೇನೆ. ಮುಂಬೈನ ಜನರು ಮತ್ತು ಪ್ರಭು ಶ್ರೀರಾಮನೇ ಶಿವಸೇನೆಗೆ ಪಾಠ ಕಲಿಸಲಿದ್ದಾರೆ’ ಎಂದು ನವನೀತ್‌ ಹೇಳಿದ್ದಾರೆ.

ನವನೀತ್‌ ಕೌರ್‌ ಮತ್ತು ಅವರ ಪತಿ ರವಿ ರಾಣಾ ಅವರಿಗೆ ಜಾಮೀನು ನೀಡುವ ವೇಳೆ, ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಬಾರದು ಎಂದು ನ್ಯಾಯಾಲಯ ಹೇಳಿದ್ದರೂ ನವನೀತ್‌ ಮಾಧ್ಯಮದೆದುರು ಮಾತನಾಡಿರುವ ಹಿನ್ನೆಲೆ ಶಿವಸೇನೆಯು ಅವರು ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next