Advertisement

ರಾಜಸ್ಥಾನ ಚುನಾವಣೆ: ಕಾಂಗ್ರೆಸ್‌ ಗೆಲುವು ಖಚಿತ: ಗೆಹಲೋತ್‌ ವಿಶ್ವಾಸ

04:02 PM Nov 30, 2018 | Team Udayavani |

ಹೊಸದಿಲ್ಲಿ : ರಾಜಸ್ಥಾನ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್‌ ಪಕ್ಷ ಗೆಲ್ಲುವ ಬಗ್ಗೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಹಾಲಿ ಸರಕಾರ ಸಾಕಷ್ಟು ಭ್ರಷ್ಟಾಚಾರ, ಅಕ್ರಮಗಳಲ್ಲಿ ತೊಡಗಿದ್ದು ಜನರಿಗೆ ಆಕೆಯ ಆಡಳಿತೆಯಿಂದ ಜುಗುಪ್ಸೆ ಬಂದಿದೆ. ಹಾಗಾಗಿ ಈ ಬಾರಿ ಜನರು ಬದಲಾವಣೆಯನ್ನು ಬಯಸಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದು ಖಚಿತ ಎಂದು ಗೆಹಲೋತ್‌ ಹೇಳಿದರು. 

ಚುನಾವಣೆಯನ್ನು ಗೆಲ್ಲುವುದಕ್ಕಾಗಿ ರಾಜೆ ಸರಕಾರ ಅಪಾರ ಪ್ರಮಾಣದ ಮಾಫಿಯಾ ಹಣವನ್ನು ಸುರಿಯುತ್ತಿದೆ; ಜನರಿಗೆ ಇನ್ನಿಲ್ಲದ ಆಮಿಷ ಒಡ್ಡುತ್ತಿದೆ ಎಂದು ಗೆಹಲೋತ್‌ ಆರೋಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next