Advertisement

ಕಾಂಗ್ರೆಸ್‌ ಈಗ ಜನರ ಅವಿಶ್ವಾಸ ಎದುರಿಸಬೇಕಾಗಿದೆ: ಫ‌ಡ್ನವೀಸ್‌

12:15 PM Jul 21, 2018 | udayavani editorial |

ಮುಂಬಯಿ : ‘ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದಲ್ಲಿ  ಅಚಲವಾದ ವಿಶ್ವಾಸವಿದೆ. ಹಾಗಾಗಿ ಕಾಂಗ್ರೆಸ್‌ ಪಕ್ಷ ಈಗ ಜನರ ಅವಿಶ್ವಾಸ ಎದುರಿಸುವಂತಾಗಿದೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಹೇಳಿದ್ದಾರೆ. 

Advertisement

ತೆಲುಗು ದೇಶಂ ಪಕ್ಷ ಮಂಡಿಸಿದ್ದ ಮತ್ತು ಕಾಂಗ್ರೆಸ್‌ನಿಂದ ಬೆಂಬಲಿತವಾದ ಮೋದಿ ಸರಕಾರದ ವಿರುದ್ಧದ ಅವಿಶ್ವಾಸ ಗೊತ್ತುವಳಿ ನಿನ್ನೆ ಸದನದಲ್ಲಿ ನಿರ್ಣಾಯಕವಾಗಿ ಬಿದ್ದುಹೋಗಿದೆ. ವಿರೋಧ ಪಕ್ಷಗಳಿಗೆ ಸರಿಯಾದ ಉತ್ತರ ನೀಡಿರುವ ಪ್ರಧಾನಿ ಮೋದಿ ಅವರು ತಮ್ಮ ಸರಕಾರದ ವಿರುದ್ಧ ವಿರೋಧ ಪಕ್ಷಗಳು,ಮುಖ್ಯವಾಗಿ ಕಾಂಗ್ರೆಸ್‌ ಪಕ್ಷ, ನಡೆಸುತ್ತಿರುವ ಅಪಪ್ರಚಾರದ ಅಭಿಯಾನವನ್ನು ಚಿಂದಿ ಮಾಡಿದ್ದಾರೆ ಎಂದು ಫ‌ಡ್ನವೀಸ್‌ ಇಂದು ಹೇಳಿದರು. 

ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಅವಿಶ್ವಾಸ ಗೊತ್ತುವಳಿ ನಿರ್ಣಾಯಕವಾಗಿ ಸೋಲಿಸಲ್ಪಟ್ಟಿರುವುದು ಮೋದಿ ಸರಕಾರಕ್ಕೆ ಒದಗಿರುವ ಪ್ರಚಂಡ ಜಯವಾಗಿದೆ ಎಂದು ಫ‌ಡ್ನವೀಸ್‌ ಹೇಳಿದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next