Advertisement

ಗೋವೆಯಲ್ಲಿ ಆಡಳಿತ ನಿಷ್ಕ್ರಿಯ: ರಾಷ್ಟ್ರಪತಿ ಆಳ್ವಿಕೆಗೆ ಕಾಂಗ್ರೆಸ್‌

04:29 PM Sep 03, 2018 | udayavani editorial |

ಪಣಜಿ : ಗೋವೆಯಲ್ಲಿ ಸಿಎಂ ಮತ್ತು ಇಬ್ಬರು ಸಚಿವರ ಆನಾರೋಗ್ಯದಿಂದ “ಆಡಳಿತೆಯಲ್ಲಿ ಕಳೆದ ಆರು ತಿಂಗಳಿಂದ ಬಿಕ್ಕಟ್ಟು  ಉಂಟಾಗಿರುವುದರಿಂದ ‘ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕು’ ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

Advertisement

ಗೋವೆಯ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌  ಹೆಚ್ಚಿನ ಚಿಕಿತ್ಸೆಗೆ ಅಮೆರಿಕಕ್ಕೆ ತೆರಳಿದ್ದಾರೆ. ಇದೇ ವೇಳೆ ಗೋವೆಯ ವಿದ್ಯುತ್‌ ಸಚಿವ ಪಾಂಡುರಂಗ ಮಡಕಾಯಿಕರ್‌ ಮತ್ತು ನಗರಾಭಿವೃದ್ಧಿ ಸಚಿವ ಫ್ರಾನ್ಸಿಸ್‌ ಡಿ’ಸೋಜ ಅವರು ಕೂಡ ಅನಾರೋಗ್ಯ ಪೀಡಿತರಾಗಿದ್ದಾರೆ. ಕಳೆದ ಆರು ತಿಂಗಳಿಂದ ರಾಜ್ಯದ ಆಡಳಿತೆಯು ಅತಂತ್ರ ಸ್ಥಿತಿಯಲ್ಲಿರುವುದರಿಂದ ಗೋವೆಯಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಅಗತ್ಯವಿದೆ’ ಎಂದು ಕಾಂಗ್ರೆಸ್‌ ಹೇಳಿದೆ. 

ರಾಜ್ಯದ ಹಿತಾಸಕ್ತಿಯ ಈ ಗಂಭೀರ ವಿಷಯದಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು ಎಂದು ಗೋವೆಯ ಕಾಂಗ್ರೆಸ್‌ ನಾಯಕ ರಮಾಕಾಂತ ಖಲಾಪ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next