Advertisement

Congress ಶಾಸಕರಿಗೆ, ಮಂತ್ರಿಗಳಿಗೆ ಗೂಟದ ಕಾರು ನೀಡಲು ಇಲ್ಲ ಬರಗಾಲ: ವಿಜಯೇಂದ್ರ ವಾಗ್ದಾಳಿ

08:24 PM Oct 20, 2023 | Team Udayavani |

ಕುಷ್ಟಗಿ:ಬರಗಾಲದಿಂದ ಪರಿತಪಿಸುವ ರೈತರಿಗೆ ಮಧ್ಯಂತರ ಪರಿಹಾರಕ್ಕೆ ಕೊಡಲು ನೂರು ಸಲ ಯೋಚನೆ ಮಾಡುವ ಕಾಂಗ್ರೆಸ್ ಸರ್ಕಾರ, ತನ್ನ ಮಂತ್ರಿಗಳಿಗೆ ಗೂಟದ ಕಾರು ಅವಶ್ಯಕತೆ ಇಲ್ಲದೇ ಇದ್ದರೂ, ಬರಗಾಲದ ಸಂದರ್ಭದಲ್ಲಿ ಹೊರ ಕಾರು ನೀಡುವ ಅವಶ್ಯಕತೆ ಏನಿತ್ತು ಎಂದು ಶಾಸಕ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.

Advertisement

ಶುಕ್ರವಾರ ಸಂಜೆ, ಲಿಂಗಸುಗೂರಿನಲ್ಲಿ ನಡೆದ ರಂಭಾಪುರಿ ಧರ್ಮ ಪೀಠ ಪರಂಪರೆಯ ಐತಿಹಾಸಿಕ ಶರನ್ನವರಾತ್ರಿ ದಸರಾ ದರ್ಬಾರ್ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಕುಷ್ಟಗಿ ಮಾರ್ಗವಾಗಿ ತೆರಳುವ ಸಂಧರ್ಭದಲ್ಲಿ ಕುಷ್ಟಗಿ ಬಿಜೆಪಿ ಕಾರ್ಯಕರ್ತರು ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹೊಸ ಸರ್ಕಾರ ಬಂದಾಗಿನಿಂದಲೂ ಅವಾಂತರಗಳು ನಡೆಯುತ್ತಿವೆ. ರಾಜ್ಯದಲ್ಲಿ ಭೀಕರ ಬರಗಾಲ ಇದೆ. ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಮೆಕ್ಕೆಜೋಳ, ರಾಗಿ, ಜೋಳ ಬೆಳೆ ಇಲ್ಲದೇ ಪರಿತಪಿಸುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ರಾಜ್ಯ ಸರ್ಕಾರ ಅಗತ್ಯವೇನು ಅರಿಯದೇ ರೈತರಿಗೆ ಸದ್ಯದ ಅವಶ್ಯಕತೆಯ ಬಗ್ಗೆ ಚರ್ಚಿಸಿಲ್ಲ ಸರ್ಕಾರದ ಆದ್ಯತೆ ಮಂತ್ರಿಗಳು ಶಾಸಕರೇ ಹೊರತು ರೈತರು, ಬಡವರು, ಜನಸಾಮಾನ್ಯರಲ್ಲ. ಇದು ನಮ್ಮ ರಾಜ್ಯದ ದುರದೃಷ್ಟವಾಗಿದೆ ಎಂದರು.

ಬರಗಾಲದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಈ ರೀತಿಯ ನಡೆ ದುರದೃಷ್ಟಕರವಾಗಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಐದು ತಿಂಗಳಾಗಿದ್ದು ಮೊನ್ನೆ ಸಿಕ್ಕ 150 ಕೋಟಿ ರೂ. ಬರೀ ಸ್ಯಾಂಪಲ್ ಅಷ್ಟೇ ಮುಂದಿನ ದಿನಗಳಲ್ಲಿ ಸರ್ಕಾರ ಯಾವ ದಿಕ್ಕಿನಲ್ಲಿ ನಡೆದಿದೆ ಎಂಬುದು ಮೊನ್ನೆ ನಡೆದ ಐಟಿ ದಾಳಿಯಲ್ಲಿ ಸಿಕ್ಕ 42 ಕೋಟಿ ರೂ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಬಹಿರಂಗವಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಸರಿಯಾಗಿ ನಡ್ಕೋಳ್ಳಿ
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿದ್ದು ಕೇಂದ್ರ ಸಕರ್ಾರ ಬೇಕಿದ್ದರೆ ರಾಜ್ಯ ಸರಕಾರವು ಸರಿಯಾಗಿ ನಡೆದುಕೊಳ್ಳಬೇಕಿದೆ. ಕೇಂದ್ರ ಸರಕಾರವು ನೇರವಾಗಿ ದೇಶದಲ್ಲಿರುವ ಬಡವರಿಗೆ ರೈತರಿಗೆ ನೇರವಾಗಿ ಅವರ ಖಾತೆಗೆ ಜಮೆ ಮಾಡುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 6ಸಾವಿರ ರೂ. ಪ್ರತಿ ಫಲಾನುಭವಿಗೆ ನೀಡಲಾಗುತ್ತಿತ್ತು. ಸಿದ್ದರಾಮಯ್ಯ ಸರಕಾರ, ಯಡಿಯೂರಪ್ಪಸರಕಾರದ ಅವಧಿಯಲ್ಲಿ ನೀಡಲಾಗುವ 4ಸಾವಿರ ರೂ. ಅದನ್ನು ಬಂದ್ ಮಾಡಿದ್ದಾರೆ ಹೀಗಾಗಿ ಕೇಂದ್ರ ಸರಕಾರವನ್ನು ಧೂಷಿಸುವ ರಾಜ್ಯ ಸರಕಾರದ ನಡೆ ಸರಿ ಅಲ್ಲ. ಬದಲಿಗೆ ಈಗಿನ ರಾಜ್ಯ ಸರಕಾರ ಸದ್ಯ ಬರಗಾಲದ ಪರಿಸ್ಥಿತಿಯಲ್ಲಿ ರೈತರಿಗೆ ಏನು ಮಾಡಬೇಕೆಂದು ಯೋಜಿಸಲಿ ಎಂದರು.

ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಬಸವರಾಜ ಹಳ್ಳೂರು, ಕುರಿ ಮತ್ತು ಉಣ್ಣೆ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಶರಣು ತಳ್ಳೀಕೇರಿ, ಪುರಸಭೆ ಮಾಜಿ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ಶಶಿಧರ ಕವಲಿ, ಮುತ್ತು ರಾಠೋಡ್, ಬಿಜೆಪಿ ಯುವ ಮೋ ಅಧ್ಯಕ್ಷ ಉಮೇಶ ಯಾದವ್, ಗವಿ ಶೆಟ್ಟರ್ ರಮೇಶ ಗಿರಣಿ, ಮತ್ತಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next