Advertisement

Congress;ದಿನೇಶ ಗುಂಡೂರಾವ್ ಕೂಡ ಸಿಎಂ ಆಗಲಿ: ಸಚಿವ ಲಾಡ್ ಸಂಚಲನ

07:10 PM Mar 15, 2024 | Team Udayavani |

ಧಾರವಾಡ : ರಾಜ್ಯದ ಆರೋಗ್ಯ ಸಚಿವರಾಗಿರುವ ದಿನೇಶ ಗುಂಡೂರಾವ್ ಕೂಡ ಮುಂದೆ ಮುಖ್ಯಮಂತ್ರಿ ಆಗಲಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಆಶಯ ವ್ಯಕ್ತಪಡಿಸಿದ್ದಾರೆ.

Advertisement

ನಗರದ ಡಾ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಡಾ.ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಕಾರ್ಯಕ್ರಮದ ವೇದಿಕೆಯಲ್ಲೇ ಸಚಿವ ದಿನೇಶ ಗುಂಡೂರಾವ್ ಸಮ್ಮುಖದಲ್ಲಿಯೇ ಈ ಮಾತನ್ನು ಲಾಡ್ ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.

ದಿನೇಶ ಗುಂಡೂರಾವ್ ಅವರ ತಂದೆ ಹಾಗೂ ನನ್ನ ತಂದೆ ನಡುವೆ ಒಳ್ಳೆಯ ಸ್ನೇಹವಿತ್ತು. ಅಲ್ಲಿಂದ ಅವರು ನನಗೆ ಪರಿಚಯ. ದಿನೇಶ ಗುಂಡೂರಾವ್ ರಾಜ್ಯದಲ್ಲಿಯೇ ಬಂಗಾರದ ಮನುಷ್ಯ ಇದ್ದಂತೆ. ಅವರೊಬ್ಬ ಅಜಾತಶತ್ರು. ಎಲ್ಲರ್‍ನೂ ಅವರು ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ. ರಾಜ್ಯದ ಜನರ ಆರೋಗ್ಯ ಕಾಪಾಡಲು ಟೊಂಕ ಕಟ್ಟಿ ನಿಂತಿರುವ ಅವರಿಗೆ ದೇವರು ಇನ್ನಷ್ಟು ಆರೋಗ್ಯ, ಆಯಸ್ಸು, ಉಜ್ವಲ ಭವಿಷ್ಯ ದಯಪಾಲಿಸಲಿ. ಮುಂದೆ ಸಿಎಂ ಕೂಡ ಆಗಲಿ ಎಂದು ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next