Advertisement

Yatnal: ಕುಂಬಳಕಾಯಿ ಕಳ್ಳನೆಂದರೆ ದಿನೇಶ್ ಗುಂಡೂರಾವ್ ಹೆಗಲು ಮುಟ್ಟಿಕೊಳ್ಳುದೇಕೆ: ಯತ್ನಾಳ

09:01 PM Apr 10, 2024 | Team Udayavani |

ವಿಜಯಪುರ : ಕಾಂಗ್ರೆಸ್ ಮನೆಯಲ್ಲಿ ಇರುವವರು ಅರ್ಧ ಪಾಕಿಸ್ತಾನ ಏಜೆಂಟರಿದ್ದಾರೆ. ಪಾಕ್ ಪರ ಘೋಷಣೆ ಕೂಗಿದ್ದನ್ನು ವಿಧಾನಸಭೆಯಲ್ಲೇ ಸಮರ್ಥಿಸಿಕೊಂಡ ಕಾಂಗ್ರೆಸ್ ಟೀಕಿಸಿದ್ದೇನೆ, ದಿನೇಶ ಗುಂಡೂರಾವ್ ಏಕೆ ಹೆಗಲು ಮುಟ್ಟಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕುಟುಕಿದ್ದಾರೆ‌

Advertisement

ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಪರ ಘೋಷಣೆ ಕೂಗಿದ್ದನ್ನು ಕಾಂಗ್ರೆಸ್ ಪಕ್ಷದವರು ವಿಧಾನಸಭೆಯಲ್ಲೇ ಸಮರ್ಥನೆ ಮಾಡಿದ್ದನ್ನು ನಿಮ್ಮ ಮನೆಯಲ್ಲಿ ಎಂದು ಟೀಕಿಸಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ನಿಮ್ಮ ಮನೆಯಲ್ಲಿ ಎಂದರೆ ಯಾವುದು, ಅವರ ಮನೆ ಹಿಂಗಿದೆ ಅಂತಾ ಯಾರಿಗೆ ಗೊತ್ತು. ಇಷ್ಟಕ್ಕೂ ನಾನು ಸ್ತ್ರೀಲಿಂಗ, ಪುಲ್ಲಿಂಗ ಎಂದೇನೂ ಬಳಸಿಲ್ಲ. ಅವರು ತಮ್ಮನ್ನು ಉದ್ದೇಶಿಸಿ ಎಂದಿರುವುದಾಗಿ (ಟಬು) ಅವರು ತಿಳಿದುಕೊಂಡರೆ, ದಿನೇಶ ಗುಂಡೂರಾವ್ ಮನೆಯಲ್ಲಿ ಅಂದರೆ ಅವರು ಹೆಗಲು ಹುಟ್ಟಿಕೊಂಡು ನೋಡಬೇಕು ಏಕೆ ಎಂದು ತಮ್ಮ ವಿರುದ್ಧ ದೂರು ದಾಖಲಿಸಿದ್ದಕ್ಕೆ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಆರ್ಥಿಕ ಮುಗ್ಗಟ್ಟಿನಲ್ಲಿದ್ದ ವೇದಾಂತ್‍ಗೆ ನೆರವಾದ ಸಿದ್ದು ಗ್ಯಾರಂಟಿ, ಮೋದಿ ಕಿಸಾನ್ ಸಮ್ಮಾನ

Advertisement

Udayavani is now on Telegram. Click here to join our channel and stay updated with the latest news.

Next