Advertisement

ಕಾಂಗ್ರೆಸ್‌ ನಾಯಕರು ನರ ಸತ್ತವರು: ಈಶ್ವರಪ್ಪ

11:21 PM May 15, 2019 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್‌ನ ಎಲ್ಲ ನಾಯಕರು ನರ ಸತ್ತವರು. ಸಿದ್ದರಾಮಯ್ಯ ಸಿಎಂ ಆಗುವ ವಿಚಾರಕ್ಕೆ ಅವರ ಚೇಲಾಗಳು ಸೋ ಎಂದು ಸೋಬಾನ ಹಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಆರೋಪಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಾಭಿಮಾನಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಏಕೆ ಸುಮ್ಮನಿದ್ದಾರೆ ಎಂದು ಗೊತ್ತಿಲ್ಲ. ಸದ್ಯ ಮೈತ್ರಿ ಪಕ್ಷದ ಯುದ್ಧದ ಮೊದಲ ಭಾಗ ಮುಗಿದಿದೆ. ಇನ್ನೂ ಪಿಕ್ಚರ್‌ ಬಾಕಿ ಇದೆ. ಮೇ 23ರ ನಂತರ ಎಲ್ಲವೂ ಗೊತ್ತಾಗಲಿದೆ.

ರಾಜ್ಯದಲ್ಲಿ ಇಂಟರ್ವಲ್‌ ರೂಪದಲ್ಲಿ ಮೈತ್ರಿ ಸರ್ಕಾರ ನಡೆಯುತ್ತಿದೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರನ್ನು ಮೇ 23ರ ನಂತರ ಎಲ್ಲಿದ್ದಾರೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು. “ಸಿದ್ದರಾಮಯ್ಯ ಅವರಿಗೆ ಹುಚ್ಚು ಹಿಡಿದಿದೆ. ಅವರನ್ನು ನಿಮ್ಹಾನ್ಸ್‌ಗೆ ಸೇರಿಸಬೇಕು. ಚಮಚಾಗಿರಿಗೆ ಇನ್ನೊಂದು ಹೆಸರೇ ಜಮೀರ ಅಹ್ಮದ್‌. ಚಮಚಾಗಿರಿ ನನ್ನ ಜೀವನದಲ್ಲಿ ಗೊತ್ತಿಲ್ಲ, ನಾನು ಹೋರಾಟದಿಂದ ಬಂದವನು.

ಯಡಿಯೂರಪ್ಪ ಸಿಎಂ ಆದರೆ ವಾಚ್‌ಮನ್‌ ಆಗುವುದಾಗಿ ಜಮೀರ್‌ ಅಹ್ಮದ್‌ ಹೇಳಿಕೆ ನೀಡಿದ್ದು, ಅಂತಹ ಕಳ್ಳನನ್ನು ಹತ್ತಿರವೂ ಸೇರಿಸಿಕೊಳ್ಳಬೇಡಿ ಎಂದು ಯಡಿಯೂರಪ್ಪ ಅವರಿಗೆ ಹೇಳಿದ್ದೇನೆ. ಜಮೀರ್‌ಗೆ ವಾಚ್‌ಮನ್‌ ಕೆಲಸ ಕೊಡೋದಿರಲಿ, ನೆಲ ಒರೆಸೋ ಕೆಲಸಕ್ಕೂ ಇಟ್ಟುಕೊಳ್ಳಬೇಡಿ ಎಂದು ಹೇಳಿದ್ದೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next