Advertisement

ಉತ್ಪಲ್ ಪರ್ರಿಕರ್ ಗೆ ಕಾಂಗ್ರೆಸ್ ಟಿಕೆಟ್ ವಂಚಿತ ನಾಯಕನ ಬೆಂಬಲ ಸಾಧ್ಯತೆ

05:56 PM Jan 23, 2022 | Team Udayavani |

ಪಣಜಿ: ಪಣಜಿ ಕ್ಷೇತ್ರದಲ್ಲಿ ಪಕ್ಷೇತರನಾಗಿ ಸ್ಫರ್ಧಿಸಲು ನಿರ್ಧರಿಸಿರುವ ನನಗೆ ಹಲವು ಪಕ್ಷಗಳ ಮುಖಂಡರು ಮತ್ತು ಸಮಾಜದ ವಿವಿಧ ನಾಗರೀಕರಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಉತ್ಪಲ್ ಪರ್ರಿಕರ್ ಹೇಳಿದ್ದಾರೆ.

Advertisement

ನನ್ನನ್ನು ಬೆಂಬಲಿಸಲು ಬಯಸುವ ಎಲ್ಲರಿಗೂ ಸ್ವಾಗತ. ಮನೆ ಮನೆಗೆ ತೆರಳಿ ಪ್ರಚಾರ, ವಿವಿಧ ಹಂತಗಳಲ್ಲಿ ನಾಯಕರ ಜೊತೆ ಸಭೆಗಳು ಆರಂಭಗೊಂಡಿವೆ. ಇನ್ನೆರಡು ದಿನಗಳಲ್ಲಿ ಚಿತ್ರಣ ಸ್ಪಷ್ಟವಾಗಲಿದೆ ಎಂದು ಉತ್ಪಲ್ ಪರ್ರಿಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಪಣಜಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಮಾಜಿ ಮೇಯರ್ ಉದಯ್ ಮಡಕಯಿಕರ್ ಸ್ಫರ್ಧಿಸುವ ಇಚ್ಛೆ ಹೊಂದಿದ್ದರು. ಆದರೆ ಕಾಂಗ್ರೆಸ್ ಎಲ್ವಿಸ್ ಗೋಮ್ಸ ರವರನ್ನು ಕಣಕ್ಕಿಳಿಸಿರುವುದರಿಂದ ಮಡಕಯಿಕರ್ ಅಸಮಾಧಾನ ವ್ಯಕ್ತಪಡಿಸಿದ್ದು, ಅವರು ಉತ್ಪಲ್ ರವರನ್ನು ಬೆಂಬಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next