Advertisement

Congress Govt.,: ವಾಲ್ಮೀಕಿ ಸಮಾಜದ ಕ್ಷಮೆ ಕೇಳಲಿ: ಆರಗ ಜ್ಞಾನೇಂದ್ರ

07:10 PM Oct 17, 2024 | Shreeram Nayak |

ಶಿವಮೊಗ್ಗ:ಯಾವ ಮುಖ ಇಟ್ಟುಕೊಂಡು ಸರ್ಕಾರದ ವತಿಯಿಂದ ವಾಲ್ಮೀಕಿ ಜಯಂತಿ ಆಚರಿಸುತ್ತಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್‌ ಸರ್ಕಾರ ವಾಲ್ಮೀಕಿ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಗ್ರಹಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಜಯಂತಿ ಬಗ್ಗೆ ಸರ್ಕಾರ ಜಾಹೀರಾತು ನೀಡಿ ಬಡವರ ಅನುದಾನದ ಬಗ್ಗೆ ಹೇಳುತ್ತಿದೆ. ಚಂದ್ರಶೇಖರ್‌ ಆತ್ಮಹತ್ಯೆ ಮಾಡಿಕೊಂಡ ಮೇಲೆ ವಾಲ್ಮೀಕಿ ನಿಗಮದ ಹಗರಣ ಹೊರಗೆ ಬಂತು. ಮೊದಲು ನಾಗೇಂದ್ರ ಪಾತ್ರ ಇಲ್ಲ ಎಂದು ಸಿಎಂ ,ಡಿಸಿಎಂ ಎದೆತಟ್ಟಿ ಹೇಳಿದರು.

ಇಡಿ ಅ ಧಿಕಾರಿಗಳು ನಾಗೇಂದ್ರ ಅವರನ್ನು ಬಂಧಿಸಿದರು. ಎಲ್ಲಾ ಹಗರಣ ಆದಾಗ ಎಸ್‌ಐಟಿ ತನಿಖೆ ಮಾಡಿ ಮಣ್ಣು ಮುಚ್ಚುವ ಚಾಳಿ ಸರ್ಕಾರಕ್ಕೆ ಬಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next