Advertisement

Udupi: ಅಡ್ಡಗಟ್ಟಿ ಹಲ್ಲೆ, ಜೀವಬೆದರಿಕೆ; ದೂರು

08:48 PM Oct 17, 2024 | Team Udayavani |

ಉಡುಪಿ: ಕಾರಿನಲ್ಲಿ ಬಂದ ಮೂವರು ವ್ಯಕ್ತಿಗಳು ಮತ್ತೂಂದು ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ತಡೆದು ನಿಲ್ಲಿಸಿ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ ಘಟನೆ ನಡೆದಿದೆ.

Advertisement

ಸಾಣೂರಿನ ಮನೋಜ್‌ ಅವರು ಉಡುಪಿಯ ಮಹೀಂದ್ರಾ ಶೋ ರೂಂನಿಂದ ವಾಹನವನ್ನು ಕಾರ್ಕಳ ಮಹೀಂದ್ರಾ ಶೋರೂಂಗೆ ಮಣಿಪಾಲ-ಕಾರ್ಕಳ ಮಾರ್ಗವಾಗಿ ತೆಗೆದುಕೊಂಡು ಹೋಗುತ್ತಿದ್ದರು.

ಬನ್ನಂಜೆಯ ಬಳಿ ತೆರಳುತ್ತಿದ್ದಾಗ ಅವರ ವಾಹನವನ್ನು ವ್ಯಾಗನಾರ್‌ ಕಾರೊಂದು ಮುಂದೆ ಹೋಗಿ ಅಡ್ಡಗಟ್ಟಿದ್ದು, ಈ ವೇಳೆ ಆ ಕಾರಿನಲ್ಲಿದ್ದ ಚಾಲಕ ಸೇರಿ ಮೂವರು ಕಾರಿನಿಂದ ಇಳಿದು ‘ಏನು ನಿನಗೆ ಕಣ್ಣು ಕಾಣುವುದಿಲ್ಲವ ನನ್ನ ಕಾರಿಗೆ ಗುದ್ದಿಸಿ ಮುಂದೆ ಹೋಗುತ್ತಿಯಾ’ ಎಂದು ಅವಾಚ್ಯ ಶಬ್ದಗಳಿಂದ ಬೈದು ‘ಜಾಸ್ತಿ ಮಾತನಾಡಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಅನಂತರ ಮೂರೂ ಮಂದಿ ಸೇರಿ ಕೈಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ.

ಅದರಲ್ಲಿದ್ದ ಓರ್ವ ವ್ಯಕ್ತಿ ಮರದ ಕೋಲಿನಿಂದ ಬೆನ್ನಿಗೆ ಮತ್ತು ಕಾಲಿಗೆ ಹೊಡೆದು ಬೆದರಿಕೆ ಹಾಕಿದ್ದಾನೆ ಎಂದು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next