Advertisement

ಕಾಂಗ್ರೆಸ್‌ ತೊರೆಯಲ್ಲ: ಶಾಸಕ ಸಂಗಮೇಶ್‌

06:15 AM Dec 01, 2018 | Team Udayavani |

ಭದ್ರಾವತಿ: “ನಾನು ಮುಂಬೈನಲ್ಲಿದ್ದೇನೆ, ಕಾಂಗ್ರೆಸ್‌ ತೊರೆಯಲಿದ್ದೇನೆ ಎಂಬುದೆಲ್ಲ ಸುಳ್ಳು. ನಾನು ಭದ್ರಾವತಿಯಲ್ಲೇ ಇದ್ದು, ಜನರ ಸಂಪರ್ಕದಲ್ಲಿಯೇ ಇದ್ದೇನೆ’ ಎಂದು ಶಾಸಕ ಬಿ.ಕೆ.ಸಂಗಮೇಶ್‌ ಹೇಳಿದರು. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜನತೆ ಗಾಳಿಸುದ್ದಿ ನಂಬಬಾರದು. ನಾನು ಪಕ್ಷಕ್ಕೆ ನಿಷ್ಠನಾಗಿದ್ದು, ಸಚಿವ ಸ್ಥಾನ ಸಿಗದೆ ಹೋದರೂ ಕಾಂಗ್ರೆಸ್‌ ಬಿಡುವುದಿಲ್ಲ. ಬಿಜೆಪಿಯ ಹಲವು ಶಾಸಕರು ಹಿಂದಿನಿಂದಲೂ ಬಿಜೆಪಿಗೆ ಬರುವಂತೆ ಆಹ್ವಾನ ನೀಡಿದ್ದರು. ಆದರೂ ಸಹ ಪಕ್ಷ ಬಿಟ್ಟು ಹೋಗಿಲ್ಲ. ಹೋಗುವುದೂ ಇಲ್ಲ’ ಎಂದರು.

“ಸಚಿವ ಸಂಪುಟ ವಿಸ್ತರಣೆ ವೇಳೆ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಅನೇಕ ಹಿರಿಯ ನಾಯಕರು ಸಚಿವ ಸ್ಥಾನ ಕೊಡುವ ಭರವಸೆಯ ಮಾತನಾಡಿದ್ದಾರೆ. ಸಚಿವ ಸ್ಥಾನ ಸಿಗಲಿ, ಬಿಡಲಿ. ಕಾಂಗ್ರೆಸ್‌ ಬಿಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next