Advertisement

ಕತ್ತಿ ಸಹೋದರರ ಲೆಕ್ಕಾಚಾರಕ್ಕೆ ಕಾಂಗ್ರೆಸ್‌ ತಣ್ಣೀರು!

11:28 PM Apr 17, 2019 | Team Udayavani |

ಬೆಳಗಾವಿ ಜಿಲ್ಲಾ ರಾಜಕಾರಣ ಈಗ ಮಂಡ್ಯಕ್ಕಿಂತಲೂ ವಿಚಿತ್ರವಾಗಿದೆ. ಬಿಜೆಪಿ-ಕಾಂಗ್ರೆಸ್‌ನಲ್ಲಿ ಆಂತರಿಕ ತಿಕ್ಕಾಟವೇ ಹೆಚ್ಚಾಗಿದೆ. ಬಿಜೆಪಿಯ ಕತ್ತಿ ಸಹೋದರರು, ಕಾಂಗ್ರೆಸ್‌ನಲ್ಲಿ ಜಾರಕಿಹೊಳಿ ಸಹೋದರರ ಒಳ ಹೊಡೆತ ಮಿತಿ ಮೀರಿದೆ. ಟಿಕೆಟ್‌ ಕೈ ತಪ್ಪಿದ್ದರಿಂದ ಮುನಿಸಿಕೊಂಡಿದ್ದ ರಮೇಶ ಕತ್ತಿ ಒಂದು ಕಾಲು ಹೊರಗಿಟ್ಟಿದ್ದರು. ಆದರೆ, ಯಡಿಯೂರಪ್ಪ ಅವರೇ ಬೆಳಗಾವಿಗೆ ಬಂದು ಸಮಾಧಾನ ಮಾಡಿ ಹೋಗಿದ್ದಾರೆ.

Advertisement

ಆದರೆ, ಇದಕ್ಕೂ ಮುನ್ನ ಮಾಜಿ ಸಂಸದ ರಮೇಶ ಕತ್ತಿ ಕಾಂಗ್ರೆಸ್‌ ಪಕ್ಷಕ್ಕೆ ಬರದಂತೆ ಜಿಲ್ಲಾ ಕಾಂಗ್ರೆಸ್‌ ನಾಯಕರೇ ತಡೆಹಾಕಿದ್ದರಂತೆ. ರಮೇಶ ಕತ್ತಿ ಕಾಂಗ್ರೆಸ್‌ಗೆ ಬರಲು ಎಲ್ಲ ಸಿದ್ಧತೆ ಆಗಿತ್ತಂತೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಮಾತುಕತೆ ಕೂಡ ಮಾಡಿ ಮುಗಿಸಿದ್ದರು. ಇದಕ್ಕೆ ಜಿಲ್ಲೆಯ ಕೆಲವು ಲಿಂಗಾಯತ ಶಾಸಕರು ಕೈಜೋಡಿಸಿದ್ದರು.

ಆದರೆ ಇದು ಗೊತ್ತಾದ ನಂತರ ಜಿಲ್ಲಾ ನಾಯಕರು ಚಿಕ್ಕೋಡಿ ಹಾಗೂ ಬೆಳಗಾವಿ ಕ್ಷೇತ್ರದ ಅಭ್ಯರ್ಥಿಗಳ ಬದಲಾವಣೆ ಇಲ್ಲ ಎಂದು ಫರ್ಮಾನು ಹೊರಡಿಸಿ ಕತ್ತಿ ಸಹೋದರರ ಲೆಕ್ಕಾಚಾರಕ್ಕೆ ತಣ್ಣೀರು ಎರಚಿದರಂತೆ. ಕತ್ತಿ ಸಹೋದರರು ಬೆಳಗಾವಿಗೆ ಬಂದರೆ ನಮ್ಮ ನಿಯಂತ್ರಣ ತಪ್ಪುತ್ತದೆ ಎಂಬುದು ಈ ನಾಯಕರ ಆತಂಕಕ್ಕೆ ಕಾರಣವಾಗಿತ್ತಂತೆ.

Advertisement

Udayavani is now on Telegram. Click here to join our channel and stay updated with the latest news.

Next