Advertisement

ಸಮಗ್ರ ಅಭಿವೃದ್ಧಿ ಹೊಣೆ ನನ್ನದು: ಪ್ರಿಯಕೃಷ್ಣ

09:43 AM May 03, 2023 | Team Udayavani |

ಬೆಂಗಳೂರು: “ನೀರಿನ ಪೈಪ್‌ಗಳಿವೆ; ಆದರೆ, ಅದರಲ್ಲಿ ನೀರೇ ಬರುತ್ತಿಲ್ಲ. ರಸ್ತೆಗಳಿದ್ದರೂ ಸದಾ ಕಾಮಗಾರಿ ಪ್ರಗತಿಯಲ್ಲಿರುತ್ತದೆ. ನೀವು ಗೆದ್ದುಬಂದರೆ ಈ ಸಮಸ್ಯೆಗಳೇ ಇರುವುದಿಲ್ಲ…’ – ಗೋವಿಂದರಾಜನಗರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಕೃಷ್ಣ ಮಂಗಳವಾರ ಶಿವಾನಂದನಗರಕ್ಕೆ ಭೇಟಿ ನೀಡಿದಾಗ, ಅಲ್ಲಿನ ಮತದಾರರಿಂದ ಕೇಳಿಬಂದ ಹಾರೈಕೆಗಳಿವು.

Advertisement

ಪ್ರಿಯದರ್ಶಿನಿ, ದಾಸರಹಳ್ಳಿ, ರಾಜಾಜಿನಗರ 6ನೇ ಬ್ಲಾಕ್‌ ಸೇರಿದಂತೆ ಹಲವು ಕಡೆಗಳಲ್ಲಿ ಮತದಾರರು ನೀರು, ರಸ್ತೆ ಮತ್ತಿತರ ಸಮಸ್ಯೆಗಳನ್ನು ಪ್ರಿಯಕೃಷ್ಣ ಅವರ ಮುಂದೆ ಹೇಳಿಕೊಂಡರು. ವರ್ಷಗಳಿಂದ ಈ ತೊಂದರೆ ಎದುರಿಸು ತ್ತಿದ್ದು, ಇವುಗಳಿಗೆ ತಾವು (ಪ್ರಿಯಕೃಷ್ಣ ಅವರನ್ನು ಉದ್ದೇಶಿಸಿ) ಪರಿಹಾರ ಕಲ್ಪಿಸು ತ್ತೀರಿ ಎಂಬ ನಂಬಿಕೆ ಇದೆ. ಹಾಗಾಗಿ, ತಮ್ಮನ್ನೇ ಬೆಂಬಲಿಸುವುದಾಗಿ ಹೇಳುತ್ತಿರುವುದು ಕಂಡುಬಂತು. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಪ್ರಿಯಕೃಷ್ಣ, “ಕ್ಷೇತ್ರದ ಸಮಗ್ರ ಅಭಿವೃದ್ಧಿ ಹೊಣೆ ನನ್ನದು. ನೀರು, ರಸ್ತೆ ಮಾತ್ರವಲ್ಲ; ಅಂಡರ್‌ಪಾಸ್‌, ಸಿಸಿ ಕ್ಯಾಮೆರಾ ಅಳವಡಿಕೆ, ಗ್ರಂಥಾಲಯ ನಿರ್ಮಾಣ, ಪಂಚಶೀಲನಗರದ ಖಾತಾ ನೀಡುವಿಕೆ ಮತ್ತಿತರ ಪ್ರಮುಖ ಕಾರ್ಯಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕಿದೆ. ತಾವು ಕೈಜೋಡಿಸಿದರೆ ಮಾತ್ರ ಇದೆಲ್ಲವೂ ಸಾಧ್ಯವಾಗುತ್ತದೆ’ ಎಂದು ಮನವಿ ಮಾಡಿದರು.

ಅಭಿವೃದ್ಧಿ ಎನ್ನುವುದು ಕೆಲವೆಡೆ ಮರೀಚಿಕೆಯಾಗಿದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೂಂದು ಕಣ್ಣಿಗೆ ಸುಣ್ಣ ಬಳಿಯಲಾಗಿದೆ. ಮುಂಬರುವ ದಿನಗಳಲ್ಲಿ ಇದಾವುದಕ್ಕೂ ಅವಕಾಶ ಇರುವುದಿಲ್ಲ. ಸಮಗ್ರ ಅಭಿವೃದ್ಧಿ ಮೂಲಮಂತ್ರ ಆಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ಇದರಿಂದ ಸಾಕಷ್ಟು ಅನುದಾನ ಕೂಡ ಕ್ಷೇತ್ರಕ್ಕೆ ದೊರೆಯುವ ವಿಶ್ವಾಸ ಇದೆ ಎಂದೂ ಪ್ರಿಯಕೃಷ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next