Advertisement

ಬಡವರಿಗೆ 10 ಕೆಜಿ ಅಕ್ಕಿ ಕಾಂಗ್ರೆಸ್‌ನಿಂದ ಮೂರನೇ ಗ್ಯಾರಂಟಿ ಘೋಷಣೆ

12:16 AM Feb 25, 2023 | Team Udayavani |

ಬೆಂಗಳೂರು: ಗೃಹಜ್ಯೋತಿ, ಗೃಹಲಕ್ಷಿ$¾à ಯೋಜನೆ ಬಳಿಕ ಕಾಂಗ್ರೆಸ್‌ ಈಗ ಬಿಪಿಎಲ್‌ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ನೀಡುವುದಾಗಿ ಘೋಷಿಸಿದೆ.

Advertisement

ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಈ ಘೋಷಣೆ ಮಾಡಿದ್ದಾರೆ.

ಕೇಂದ್ರದಲ್ಲಿ ಮನಮೋಹನ್‌ ಸಿಂಗ್‌  ಸರಕಾರದ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದು 3 ರೂ.ಬೆಲೆಯಲ್ಲಿ ಅಕ್ಕಿ ನೀಡಲು ಆರಂಭಿಸಿತ್ತು. 2013ರಲ್ಲಿ “ಅನ್ನಭಾಗ್ಯ’ ಯೋಜನೆ ನೀಡಿದ್ದೆವು. ಆಗ ಪ್ರತಿ ಸದಸ್ಯರಿಗೆ 7 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಿದ್ದೆವು ಎಂದರು.

ಪ್ರಜಾಧ್ವನಿ ಯಾತ್ರೆಯಲ್ಲಿ ಅಕ್ಕಿ ಹೆಚ್ಚಿಸುವಂತೆ ಜನ ಕೇಳಿದ್ದಾರೆ. ಈ ಬಳಿಕ ನಾವು ಚರ್ಚಿಸಿ  ಈ ಯೋಜನೆಯನ್ನು ಪಕ್ಷದ 3ನೇ ಗ್ಯಾರಂಟಿಯಾಗಿ ಘೋಷಿಸುತ್ತಿದ್ದೇವೆ. 10 ಕೆಜಿ ಅಕ್ಕಿ ನೀಡುವುದರಿಂದರ 3ರಿಂದ 4 ಸಾವಿರ ಕೋಟಿ ರೂ. ಗೂ ಹೆಚ್ಚು ವೆಚ್ಚ ತಗಲಬಹುದು. ಅದನ್ನು ನಿಭಾಯಿಸಲಿದ್ದೇವೆ ಎಂದು ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next