Advertisement

ಕಾಂಗ್ರೆಸ್‌ 50 ಪರ್ಸೆಂಟ್‌ ಸರಕಾರ: ದಾಖಲೆ ಬಿಡುಗಡೆ ಮಾಡಿದ ಬಿಜೆಪಿ

10:42 PM Jan 11, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದಾಗ 50 ಪರ್ಸೆಂಟ್‌ ಕಮಿಷನ್‌ ದಂಧೆ ನಡೆಸಿತ್ತು ಎಂದು ಆರೋಪಿಸಿರುವ ಬಿಜೆಪಿ, ಇದಕ್ಕೆ ಸಂಬಂಧಪಟ್ಟಂತೆ ಬುಧವಾರ ದಾಖಲೆ ಬಿಡುಗಡೆ ಮಾಡಿದೆ.

Advertisement

ಪತ್ರಿಕಾಗೋಷ್ಠಿàಯಲ್ಲಿ ದಾಖಲೆ ಬಿಡುಗಡೆ ಮಾಡಿದ ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ನಗರೋತ್ಥಾನ ಯೋಜನೆಯ ಟೆಂಡರ್‌ ಶ್ಯೂರ್‌ ರಸ್ತೆ ಕಾಮಗಾರಿಗಳಲ್ಲಿ ಶೇ.50ಕ್ಕೂ ಮೀರಿ ಪರ್ಸೆಂಟೇಜ್‌ ದಂಧೆ ನಡೆಸಿದೆ ಎಂದು ಆರೋಪಿಸಿದರು.

2017-18ರಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 9 ಕಿ.ಮೀ. ಉದ್ದದ ಟೆಂಡರ್‌ ಶ್ಯೂರ್‌ ರಸ್ತೆ ನಿರ್ಮಾಣಕ್ಕೆ ಆರಂಭದಲ್ಲಿ 75.01 ಕೋಟಿ ರೂ. ಟೆಂಡರ್‌ ಕರೆಯಲಾಗಿತ್ತು. ಆ ಬಳಿಕ ಇದನ್ನು 115.33 ಕೋಟಿ ರೂ.ಗೆ ಹೆಚ್ಚಿಸಿದ್ದರು. ಟೆಂಡರ್‌ ಪ್ರೀಮಿಯಂನನ್ನು ಶೇ.53.86ರಷ್ಟು ಹೆಚ್ಚಿಸಿದ್ದರು.

7.59 ಕಿ.ಮೀ. ಉದ್ದರ ರಸ್ತೆ ನಿರ್ಮಾಣಕ್ಕೆ ಮೊದಲು 58.45 ಕೋಟಿ ರೂ. ನಿಗದಿ ಮಾಡಿ ಬಳಿಕ 86.46 ಕೋ. ರೂ.ಗೆ ಹೆಚ್ಚಳ ಮಾಡಿದ್ದರು. ಇದರಲ್ಲಿ ಟೆಂಡರ್‌ ಪ್ರೀಮಿಯಂ ಶೇ.47.89ರಷ್ಟು ಹೆಚ್ಚಿತ್ತು. ಯಾವ ಉದ್ದೇಶಕ್ಕಾಗಿ ಅಂದಿನ ಸರಕಾರ ಟೆಂಡರ್‌ ಪ್ರೀಮಿಯಂ ಹೆಚ್ಚಿಸಿತ್ತು ಎಂಬ ಬಗ್ಗೆ ಉತ್ತರಿಸಬೇಕು. ಕಾಂಗ್ರೆಸ್‌ನವರದ್ದು 50 ಪರ್ಸೆಂಟ್‌ ಸರಕಾರವಾಗಿತ್ತು ಎಂದು ದೂರಿದರು.

ಉಗ್ರರಿಗೆ ಸರ್ಟಿಫಿಕೇಟ್‌ ಕೊಡುವ ಯಾತ್ರೆ
ಬೆಂಗಳೂರು: ಕಾಂಗ್ರೆಸ್‌ ಬಸ್‌ ಯಾತ್ರೆ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ “ಇದು ಉಗ್ರರಿಗೆ, ಲವ್‌ ಜಿಹಾದಿಗಳಿಗೆ ಪುಷ್ಠಿ ನೀಡುವ ಯಾತ್ರೆ” ಎಂದು ಟೀಕಿಸಿದೆ.

ವಿಧಾನಸೌಧದದಲ್ಲಿ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ವಿಧಾನ ಪರಿಷತ್‌ ಸದಸ್ಯರುಗಳಾದ ಎನ್‌. ರವಿಕುಮಾರ್‌, ಛಲವಾದಿ ನಾರಾಯಣ ಸ್ವಾಮಿ ಹಾಗೂ ಭಾರತಿ ಶೆಟ್ಟಿ, ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟದ ಆರೋಪಿಗೆ ಅಮಾಯಕ ಎಂದು ಕ್ಲೀನ್‌ ಚಿಟ್‌ ನೀಡಿದ್ದ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಈಗ ಬಸ್‌ ಯಾತ್ರೆ ಮೂಲಕ ಖಾಲಿಡಬ್ಟಾದ ಸದ್ದು ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

Advertisement

ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡಿದ್ದ ಕಾಂಗ್ರೆಸ್‌ ಆ ಬಗ್ಗೆ ಸೂಕ್ತ ದಾಖಲೆ ಕೊಡುವಲ್ಲಿ ವಿಫ‌ಲವಾಗಿದೆ. ನ್ಯಾಯಾಲಯಕ್ಕೆ ಸಾಕ್ಷ್ಯ ಕೊಡುತ್ತೇನೆ ಎಂದು ಹೇಳಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕೂಡ ದಾಖಲೆ ಒದಗಿಸಿಲ್ಲ. ಇದು ಬಿಜೆಪಿ ಬಗ್ಗೆ ಅಪಪ್ರಚಾರ ನಡೆಸಲು ಕಾಂಗ್ರೆಸ್‌ ಹೆಣೆದ ಟೂಲ್‌ ಕಿಟ್‌ ರಾಜಕಾರಣದ ಭಾಗ ಎಂದು ತಿರುಗೇಟು ನೀಡಿದರು.

ಬಸ್‌ ಯಾತ್ರೆ ಸಂದರ್ಭದಲ್ಲಿ ಉಚಿತ ವಿದ್ಯುತ್ ಭರವಸೆ ನೀಡಿರುವ ಕಾಂಗ್ರೆಸ್‌ ನಾಯಕರು ಜನರನ್ನು ಮೋಸ ಮಾಡಲು ಹೊರಟಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಆಡಳಿತದಲ್ಲಿ ಇರುವ ರಾಜ್ಯ ಸರ್ಕಾರಗಳು ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇರುವ ರಾಜ್ಯಗಳು ಬೆಲೆ ಇಳಿಕೆ ಮಾಡಲಿಲ್ಲ. ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಕತ್ತಲೆ ಇತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ವಿದ್ಯುತ್‌ ಕ್ಷಾಮ ಕಡಿಮೆಯಾಗಿದೆ ಎಂದು ಹೇಳಿದರು.

ಅಲೆಮಾರಿ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು “ಅಲೆಮಾರಿ ಸಿದ್ದ” ಎಂದು ಟೀಕಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, “ಶ್ರೀನಿವಾಸಗೌಡರು ಕೋಲಾರ ಕ್ಷೇತ್ರವನ್ನು ಬಿಟ್ಟುಕೊಡುವ ಹಿನ್ನೆಲೆ ಏನೆಂಬ ಬಗ್ಗೆ ಆಡಿರುವ ಮಾತುಗಳ ಆಡಿಯೋ ರಿಲೀಸ್‌ ಮಾಡಿದರು.

ಶ್ರೀನಿವಾಸಗೌಡರು ಕ್ಷೇತ್ರ ತ್ಯಾಗ ಮಾಡಿದ್ದಾರೆ ಎಂಬುದು ಸುಳ್ಳು. ಅವರಿಗೆ ಖುದ್ದು ಸಿದ್ದರಾಮಯ್ಯನವರೇ ಆಮಿಷವೊಡ್ಡಿದ್ದಾರೆ. ತಾವು ಮಾಡಿರುವ 17.5 ಕೋಟಿ ರೂ.ಸಾಲ ತೀರಿಸುವ ಜತೆಗೆ ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ಕೊಡಿಸುವುದಾಗಿ ಸಿದ್ದರಾಮಯ್ಯ ಭರವಸೆ ಕೊಟ್ಟಿರುವ ಬಗ್ಗೆ ಶ್ರೀನಿವಾಸ ಗೌಡರು ಆಡಿಯೋದಲ್ಲಿ ತಿಳಿಸಿದ್ದಾರೆ.

ಸಿದ್ದರಾಮಯ್ಯನವರು ವರುಣಾ, ಚಾಮುಂಡೇಶ್ವರಿ, ಬಾದಾಮಿಯಲ್ಲಿ ಅಲೆದಾಟ ನಡೆಸಿ ಈಗ ಕೋಲಾರಕ್ಕೆ ಬಂದಿದ್ದಾರೆ. ಅಲ್ಲಿಯೂ ಅವರು ಸೋಲುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next