Advertisement

ಅಂಕೋಲಾಕ್ಕೆ ಪ್ರಧಾನಿ ಬಂದು ಹೋದ ಮೇಲೆ ಆತ್ಮವಿಶ್ವಾಸ ಹೆಚ್ಚಿದೆ: ವೆಂಕಟೇಶ ನಾಯಕ್

03:49 PM May 04, 2023 | Team Udayavani |

ಕಾರವಾರ: ಜಿಲ್ಲೆಯಲ್ಲಿ ಬುಧವಾರ ನಡೆದ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ ನಂತರ ನಮ್ಮ ಆತ್ಮವಿಶ್ವಾಸ ಹೆಚ್ಚಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ್ ಹೇಳಿದರು‌.

Advertisement

ಕಾರವಾರದಲ್ಲಿ ಗುರುವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಮಾಡಿದ ಅವರು ಬಿಜೆಪಿ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಜನರು ಬಂದಿದ್ದರು. ಬಿಗಿ ಭದ್ರತಾ ಕಾರಣ ನೀರನ್ನು ಸಹ ಮಾಧ್ಯಮದವರಿಗೆ ಕೊಡಲಾಗದ್ದಕ್ಕೆ ಕ್ಷಮೆಯಾಚಿಸಿದರು. ಪಕ್ಷದ ಅಭ್ಯರ್ಥಿಯೋರ್ವರು, ಅನ್ಯ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಕಣಕ್ಕೆ ನಿಂತಿರುವ ಗೆಳೆಯನ ಗೆಲುವಿಗೆ ಯತ್ನಿಸಿದ ಸುದ್ದಿ ಇದೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧ್ಯಕ್ಷರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. ಕಾರವಾರ ಅಭ್ಯರ್ಥಿ ವಿರುದ್ಧ ಪಕ್ಷೇತರನನ್ನು ನಿಲ್ಲಿಸಿದ ಸಂಗತಿಗೂ ಸಹ ವೆಂಕಟೇಶ ನಾಯಕ್ ಉತ್ತರಿಸಿ, ಈ ಬಗ್ಗೆ ಮಾಹಿತಿ ಇಲ್ಲ. ಅಂಥದ್ದೇನು ಪಕ್ಷದಲ್ಲಿ ಇಲ್ಲ ಎಂದರು.

ಗಂಗಾಧರ ಭಟ್ ಉಚ್ಛಾಟನೆ: ಕಾರವಾರ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿರುವ ಗಂಗಾಧರ ಭಟ್ಟರನ್ನು ಪಕ್ಷದ ರಾಜ್ಯ ಶಿಸ್ತು ಸಮಿತಿ ಲಿಂಗರಾಜ್ ಅವರು ಉಚ್ಚಾಸಿದ್ದಾರೆ. ಹಾಗಾಗಿ ಗಂಗಾಧರ ಭಟ್ಟರಿಗೂ ಪಕ್ಷಕ್ಕೂ ಸಂಬಂಧ ಮುಗಿದಿದೆ ಎಂದರು. ಕಾಂಗ್ರೆಸ್ ಭಜರಂಗ ದಳ ನಿಷೇಧಕ್ಕೆ ಮುಂದಾಗುತ್ತದೆ ಎಂಬುದನ್ನು ಖಂಡಿಸುವೆ ಎಂದ ಅವರು ಹನುಮಂತ ನಮ್ಮ ದೇವರು. ದಕ್ಷಿಣ ಭಾರತದ ಮಹತ್ವದ ದೈವ. ಆತನ ಬಳಗ ಭಜರಂಗ ದಳವನ್ನು ನಿಷೇಧ ಮಾಡಲು ಮುಂದಾಗುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದ ನಿಲುವು ನಮಗೆ ಒಳ್ಳೆಯದೇ ಆಗಿದೆ. ಅದನ್ನು ಹನುಮ‌ ಭಕ್ತರು ಗಂಭೀರವಾಗಿ ತೆಗೆದುಕೊಳ್ಳಲಿದ್ದಾರೆಂದರು.

ಗೋ ಹತ್ಯೆ ನಿಷೇಧ ತೆಗೆದು ಹಾಕುವ ಲಕ್ಷಣ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾವು ತಂದ ಕಾನೂನುಗಳು ರದ್ದಾಗಲಿ ಎಂದ ಅವರು ಇದಕ್ಕೆ ಜನ ಅವಕಾಶ ಕೊಡುವುದಿಲ್ಲ ಎಂದರು.

ಸಂಸದ ಸಿಂಗಾಪುರಕ್ಕೆ: ಪ್ರಧಾನಿ ನರೇಂದ್ರ ಮೋದಿ ಉತ್ತರ ಕನ್ನಡ  ಜಿಲ್ಲೆಗೆ  ಬಂದಾಗ ಸಂಸದ ಅನಂತ ಕುಮಾರ್ ಹೆಗಡೆ ಗೈರು ಹಾಜರಿ ಎಷ್ಟರ ಮಟ್ಟಿಗೆ ಸರಿ ಎಂದು ಪತ್ರಕರ್ತರು ಪ್ರಶ್ನಿಸಿದಾಗ , ಪ್ರಧಾನಿ ಕಾರ್ಯಕ್ರಮ ಇದೆ ಎಂದು ತಿಳಿಸಲು ಸಂಸದ ಅನಂತ ಕುಮಾರ್ ಹೆಗಡೆಗೆ ಪೋನ್ ಮಾಡಿದ್ದೆ. ಆಗ ಅವರು ಬರುತ್ತೇನೆ ಎಂದಿದ್ದರು. ನಂತರ ಮತ್ತೆ ಕರೆ ಮಾಡಿದಾಗ ಸಿಂಗಾಪುರ ಪ್ರವಾಸದಲ್ಲಿರುವುದಾಗಿ ಹೇಳಿದರು. ಪಕ್ಷದ ಚಟುವಟಿಕೆ, ಹಾಗೂ ಅಭ್ಯರ್ಥಿಗಳ ಪ್ರಚಾರಕ್ಕೆ ಸಹ ಕೆನರಾ‌ ಸಂಸದ ಅನಂತ ಕುಮಾರ್ ಹೆಗಡೆ ಬರುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷರು ಮೌನವಾದರು. ಪಕ್ಷದ ಹಿರಿಯರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದಷ್ಟೇ ಉತ್ತರಿಸಿದರು.

Advertisement

ಬಿಜೆಪಿ ಬಾಗಿಲು ತಟ್ಟಿದ್ದ ಅಸ್ನೋಟಿಕರ್; ಬಿಜೆಪಿ ಬಾಗಿಲು ತಟ್ಟುತ್ತಿದ್ದ ಹಾಗೂ ಈ ಸಲ ಬಿಜೆಪಿ ಟಿಕೆಟ್ ಗೆ ಯತ್ನಿಸಿದ್ದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಇವತ್ತಿನಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ನಿಂತಿದ್ದರಲ್ಲಾ ಎಂಬ ಪ್ರಶ್ನೆಗೆ ಅವರು ಏನು ಅಂತ ಪಕ್ಷಕ್ಕೆ ಗೊತ್ತಿದೆ. ನಮ್ಮಲ್ಲಿ ಒಮ್ಮೆ ಹೊರ ಹಾಕಿದವರನ್ನು ಒಳಗೆ ತಗೋಳೋದು ಕಷ್ಟ. ಅವರು ಪಕ್ಷಾಂತರಿ. ಅವರ ಹಿನ್ನೆಲೆ ಕಾಂಗ್ರೆಸ್. ಹಾಗಾಗಿ ಅವರ ಬಗ್ಗೆ ನಾವು ಅಷ್ಟು ಯೋಚಿಸುವುದಿಲ್ಲ ಎಂದರು. ಅವರು ಯಾರ ಪ್ರಚಾರ ಮಾಡಿದರೂ ನಮಗೆ ಅಭ್ಯಂತರ ಇಲ್ಲ.ನಮ್ಮ ಅಭ್ಯರ್ಥಿ ಕಾರವಾರದಲ್ಲಿ 25 ಸಾವಿರ ಮತಗಳ  ಅಂತರದಲ್ಲಿ ಗೆಲ್ಲಲಿದ್ದಾರೆ ಎಂದರು‌ .

ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ನಾಗರಾಜ ನಾಯಕ, ಮನೋಜ್ ಭಟ್, ರೇಶ್ಮಾ ಮಾಳ್ಸೇಕರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next