Advertisement

London: ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಕರಡು ಮಂಡನೆ

09:43 PM Nov 04, 2023 | Team Udayavani |

ಲಂಡನ್‌: ಹಿಂದೂವಿರೋಧಿ ಹಾಗೂ ದ್ವೇಷದ ಕೃತ್ಯಗಳು ಬ್ರಿಟನ್‌ನಲ್ಲಿ ಹೆಚ್ಚುತ್ತಿರುವ ನಡುವೆಯೇ ಅವುಗಳಿಗೆ ಕಡಿವಾಣಹಾಕುವ ನಿಟ್ಟಿನಲ್ಲಿ ಭಾರತೀಯ ಮೂಲದ ಬ್ರಿಟನ್‌ ಅಸೆಂಬ್ಲಿ ಸದಸ್ಯರಾದ ಕೃಪೇಶ್‌ ಹಿರಾನಿ ಲಂಡನ್‌ ಸಂಸತ್ತಿನಲ್ಲಿ ವಿಶೇಷ ಕರಡನ್ನು ಮಂಡಿಸಿದ್ದಾರೆ.

Advertisement

ದೇಶದಲ್ಲಿ ಹಿಂದೂಫೋಬಿಯಾದಂಥ ಪರಿಸ್ಥಿತಿ ನಿರ್ಮಾಣವಾಗಿದ್ದು, ಧಾರ್ಮಿಕ ದ್ವೇಷದ ಕಾರಣಕ್ಕಾಗಿಯೂ ಹಿಂದೂಗಳನ್ನು ಗುರಿಯಾಗಿಸಿ ನಡೆಸುತ್ತಿರುವ ದಾಳಿಗಳು ಹೆಚ್ಚುತ್ತಿವೆ. ಆದರೆ ಪೊಲೀಸರ ದಾಖಲೆಗಳಲ್ಲಿ ಮಾತ್ರ ಇವು ಮರೆಯಾಗುತ್ತಿವೆ.

ಇದರಿಂದ ದಿನದಿಂದ ದಿನಕ್ಕೆ ಹಿಂದೂ ಸಮುದಾಯದ ಸಮಸ್ಯೆ ಬಿಗುಡಾಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋಪಾಲಿಟನ್‌ ಪೊಲೀಸರು ಹಿಂದೂಗಳ ವಿರುದ್ಧದ ದೌರ್ಜನ್ಯವನ್ನು ಗುರುತಿಸಿ, ಮಟ್ಟಹಾಕಲು ಸಹಕಾರಿಯಾಗುವ ರೀತಿಯಲ್ಲಿ ಹಿಂದೂ ಸಮುದಾಯದ ಜತೆಗೆ ಕಾರ್ಯನಿರ್ವಹಿಸಬೇಕು ಎಂದು ಕರಡಿನಲ್ಲಿ ಉಲ್ಲೇಖೀಸಲಾಗಿದೆ. ಕರಡು ಮಂಡನೆಯಾಗುತ್ತಿದ್ದಂತೆ ಸರ್ವಾನುಮತದಿಂದ ಅಂಗೀಕಾರವೂಗೊಂಡಿದ್ದು, ದೀಪಾವಳಿಗೂ ಮುನ್ನವೇ ಲಂಡನ್‌ನ ಹಿಂದೂ ಸಮುದಾಯಗಳಿಗೆ ಭದ್ರತೆಯ ಉಡುಗೊರೆ ಸಿಕ್ಕಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next