Advertisement

ಮನೆಯ ಕಂಪೌಂಡ್‌ ಕುಸಿತ: ಮೂರರ ಹರೆಯದ ಮಗು ಸಾವು

09:14 PM Jun 08, 2020 | Sriram |

ಉಳ್ಳಾಲ: ಮನೆಯ ಕಂಪೌಂಡ್‌ ಕುಸಿದು ಬಿದ್ದು ಅದರಡಿ ಸಿಲುಕಿದ್ದ ಮೂರರ ಹರೆಯದ ಮಗು ಧಾರುಣವಾಗಿ ಸಾವನ್ನಪ್ಪಿದ ಘಟನೆ ಮುನ್ನೂರು ಗ್ರಾಮದ ಸಂತೋಷ್‌ ನಗರದ ಮಸೀದಿ ಬಳಿ ಸೋಮವಾರ ಸಂಜೆ ನಡೆದಿದೆ.ಮೃತ ಮಗುವಿನ ಸಹೋದರನಿಗೆ ತರಚು ಗಾಯಗಳಿಂದ ಪಾರಾಗಿದ್ದಾರೆ.

Advertisement

ಅಂಬ್ಲಿಮೊಗರು ಗ್ರಾಮದ ಸಣ್ಣ ಮದಕ ನಿವಾಸಿ ಅಶ್ರಫ್‌ ಆಯೇಷಾ ದಂಪತಿಗಳ ಪುತ್ರ ಐಮಾನ್‌ (3) ಮೃತಪಟ್ಟ ಮಗುವಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ಸಂತೋಷ್‌ ನಗರದ ಮಸೀದ ಬಳಿ ನಿವಾಸಿ ಇಲಿಯಾಸ್‌ ಅವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದು, ಸಂಜೆ ಐಮಾನ್‌ ಮತ್ತು ಆತನ ಸಹೋದರ ಕಂಪೌಂಡ್‌ ಬಳಿಯ ಗೇಟ್‌ನಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಮೃತ ಐಮಾನ್‌ ತನ್ನು ಸಹೋದರ ಆರು ವರ್ಷದ ಅಯಾನ್‌ನೊಂದಿಗೆ ಮನೆ ಎದುರಿನ ಕಂಪೌಂಡ್‌ನ‌ ಗೇಟ್‌ನಲ್ಲಿ ಆಟವಾಡುತ್ತಿದ್ದರು. ಅಯಾನ್‌ ಗೇಟ್‌ನಲ್ಲಿ ಆಟವಾಡುತ್ತಿದ್ದಂತೆ ಗೇಟ್‌ನೊಂದಿಗೆ ಇಡೀ ಕಂಪೌಂಡ್‌ ಸಂಪೂರ್ಣ ಕುಸಿದು ಐಮಾನ್‌ ಮೇಲೆ ಬಿದ್ದಿದ್ದು, ಅಯಾನ್‌ ಸ್ವಲ್ಪದರಲ್ಲೇ ಪಾರಾಗಿದ್ದರು. ತಲೆಗೆ ಗಂಭೀರ ಗಾಯಗೊಂಡಿದ್ದ ಐಮಾನ್‌ನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಮಧ್ಯೆಯೇ ಮಗು ಮೃತಪಟ್ಟಿದ್ದು, ಗಾಯಗೊಂಡ ಅಯಾನ್‌ಗೆ ಚಿಕಿತ್ಸೆ ನೀಡಲಾಗಿದೆ. ಬಡಕುಟುಂಬದ ಅಶ್ರಪ್‌ ಚಾಲಕನಾಗಿದ್ದು, ಘಟನೆ ಸಂದರ್ಭದಲ್ಲಿ ಮನೆಯಲ್ಲಿ ತಾಯಿ ಮತ್ತು ಮಕ್ಕಳಿಬ್ಬರು ಇದ್ದರು.

ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next