Advertisement

Politics: ಟಿಡಿಪಿ ಮತ ಸೆಳೆಯಲು ಪೈಪೋಟಿ

01:07 AM Nov 06, 2023 | Team Udayavani |

ಚುನಾವಣ ರಾಜಕೀಯಕ್ಕೆ ಬಂದಾಗ ಯಾವುದೇ ಪಕ್ಷಗಳು ಸನ್ನಿವೇಶಕ್ಕೆ ತಕ್ಕಂತೆ ತಂತ್ರಗಾರಿಕೆಗೆ ಶರಣಾಗುತ್ತವೆ. ಪ್ರಸ್ತುತ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಅಂತಹದ್ದೊಂದು ಸಂದಿಗ್ಧ ಸನ್ನಿವೇಶವಿದೆ. ಆಂಧ್ರಪ್ರದೇಶವನ್ನು ಒಡೆದು ಕೊಂಡು ಹುಟ್ಟಿದ ತೆಲಂಗಾಣದಲ್ಲಿ, ಆಂಧ್ರದಿಂದ ಬಂದು ನೆಲೆಸಿ ಮತದಾರರಾಗಿರುವ ವ್ಯಕ್ತಿಗಳ ಸಂಖ್ಯೆ ದೊಡ್ಡದೇ ಇದೆ. ವಿಧಾನಸಭಾ ಚುನಾ ವಣೆಯಲ್ಲಿ, ಆ ಮತದಾರರನ್ನು ಸೆಳೆಯಲು ಕೆ.ಚಂದ್ರ ಶೇಖರ ರಾವ್‌ ನೇತೃತ್ವದ ಬಿಆರ್‌ಎಸ್‌, ಕಾಂಗ್ರೆಸ್‌ ಪಕ್ಷಗಳು ಪ್ರಬಲ ಯತ್ನ ನಡೆಸುತ್ತಿವೆ. ಅದಕ್ಕೆ ಸರಿಯಾಗಿ ಈ ಬಾರಿ ತೆಲಂಗಾಣ ಚುನಾ ವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ. ಅವರು ಅ.31ರಂದು ಕೌಶಲಾಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆಸಿದ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿದ್ದರು.

Advertisement

ಈಗ ತೆಲಂಗಾಣದಲ್ಲಿರುವ ಹೈದರಾಬಾದ್‌, ನಲ್ಗೊಂಡಾ, ಖಮ್ಮಮ್‌ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಆಂಧ್ರ ಮೂಲದ ಮತದಾರರರಿದ್ದಾರೆ. ಅಲ್ಲಿನ ಮತದಾರರ ಮೇಲೆ ಟಿಡಿಪಿ ಹಿಡಿತವಿದೆ. ಅವರನ್ನು ಸೆಳೆದುಕೊಳ್ಳಲು ಬಿಆರ್‌ಎಸ್‌, ಕಾಂಗ್ರೆಸ್‌ ನಾಯಕರು ಪೈಪೋಟಿ ಶುರು ಮಾಡಿದ್ದಾರೆ. ಹಿಂದೆ ಟಿಡಿಪಿಯಲ್ಲಿದ್ದ ಟಿ.ಶ್ರೀನಿವಾಸ್‌ ಯಾದವ್‌ (ತೆಲಂಗಾಣ ಸಚಿವ), ಚಂದ್ರಬಾಬು ಬಿಡುಗಡೆಗೆ ಆಗ್ರಹಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿನ ಸಾರಿಗೆ ಸಚಿವ ಅಜಯ್‌ ಕುಮಾರ್‌ ಪುವ್ವಡ ಚಂದ್ರಬಾಬುರನ್ನು ಹೊಗಳಿದ್ದಾರೆ. ಮತ್ತೂಬ್ಬ ತೆಲಂಗಾಣ ಸಚಿವ ಕೆ.ಟಿ.ರಾಮರಾವ್‌ ಕೂಡ ಚಂದ್ರಬಾಬು ಪರ ಮಾತನಾಡಿದ್ದಾರೆ. ಕಾಂಗ್ರೆಸ್‌ ನಾಯಕರಾದ ಮಧು ಯಾಶ್ಕಿ ಗೌಡ್‌, ತುಮ್ಮಲ ನಾಗೇಶ್ವರ ರಾವ್‌ ಕೂಡ ಚಂದ್ರಬಾಬು ಅವರ ಓಲೈಕೆಯಲ್ಲಿ ನಿರತರಾಗಿದ್ದಾರೆ. ಇವರೆಲ್ಲರ ಉದ್ದೇಶ ಟಿಡಿಪಿ ಮತಗಳನ್ನು ತಮ್ಮ ಪರವಾಗಿ ಸೆಳೆದುಕೊಳ್ಳುವುದಷ್ಟೇ!

Advertisement

Udayavani is now on Telegram. Click here to join our channel and stay updated with the latest news.

Next