Advertisement

ಸಮಿತಿ ರಚಿಸುವ ಗಿಮಿಕ್‌: ಬಿಎಸ್‌ವೈ

05:15 AM Jul 20, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಿತಿ ಮೀರುತ್ತಿರುವ ಭ್ರಷ್ಟಾಚಾರ ಪ್ರಕರಣಗಳು, ದುರಾಡಳಿತ, ಸ್ವಜನ ಪಕ್ಷಪಾತಗಳಿಂದ ಜನರ ಗಮನ ಬೇರೆಡೆ ಸೆಳೆಯಲು ರಾಜ್ಯ ಸರ್ಕಾರ ನಾಡಧ್ವಜ ಸ್ಥಾಪನೆಗೆ ಸಮಿತಿ ರಚಿಸುವ ಗಿಮಿಕ್‌ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ.

Advertisement

ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅವರು ಮಾತನಾಡಿದರು. ದೇಶದ ಯಾವುದೇ ರಾಜ್ಯಗಳಲ್ಲಿ ನಾಡಧ್ವಜಕ್ಕೆ ಸಾಂವಿಧಾನಿಕ ಸ್ಥಾನಮಾನವಿಲ್ಲ ಎಂಬುದು ಗೊತ್ತಿದ್ದರೂ ಸರ್ಕಾರ ವಿನಾ ಕಾರಣ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ. ಆ ಮೂಲಕ ತನ್ನ ಕೆಟ್ಟ ಆಡಳಿತವನ್ನು ಮುಚ್ಚಿಕೊಳ್ಳಲು ಹೊರಟಿದೆ ಎಂದು ದೂರಿದರು. ಈಗಾಗಲೇ ರಾಜ್ಯದಲ್ಲಿ ಕನ್ನಡಕ್ಕೊಂದು ಧ್ವಜವಿದೆ. ರಾಷ್ಟ್ರಧ್ವಜಕ್ಕೆ ನೀಡಿದ ಗೌರವವನ್ನೇ ಈ ಧ್ವಜಕ್ಕೂ ನೀಡುತ್ತಿದ್ದೇವೆ. ರಾಜ್ಯೋತ್ಸವದ ದಿನ ನಾಡಧ್ವಜವನ್ನೂ ಹಾರಿಸುತ್ತೇವೆ. ಹೀಗಿರುವಾಗ ಸರ್ಕಾರದ ಹುಳುಕುಗಳನ್ನು ಮುಚ್ಚಿಹಾಕಲು ನಾಡಧ್ವಜ ವಿಚಾರವನ್ನು ದೊಡ್ಡದಾಗಿ ಬಿಂಬಿಸುವುದು ಸರಿಯಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಬಿಜೆಪಿಯವರು ಕನ್ನಡ ವಿರೋಧಿಗಳು ಎನ್ನುವಂತೆ ನೋಡುತ್ತಾರೆ.

ಆದರೆ, ಬಿಜೆಪಿ ಕನ್ನಡ ಮತ್ತು ಕನ್ನಡಿಗರ ಪರವಾಗಿದೆ ಎಂಬುದನ್ನು ತಾವು ಮುಖ್ಯಮಂತ್ರಿಯಾಗಿದ್ದಾಗ ಸಾಬೀತುಪಡಿಸಿರುವುದಾಗಿ ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next