Advertisement

ಕಮಾಂಡೋ ಪಡೆ ನಿಗಾದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ

06:52 AM Nov 29, 2018 | |

ಪಂಪಾ: ಮಹಿಳೆಯರಿಗೆ ಅಯ್ಯಪ್ಪ ದೇಗುಲ ಪ್ರವೇಶ ವಿವಾದದ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಈಗ ಶಸ್ತ್ರಧಾರಿ ಕಮಾಂಡೋ ಪಡೆಗಳದ್ದೇ “ಹವಾ’. ಅಯ್ಯಪ್ಪ ದರ್ಶನಕ್ಕೆ ಬರುವ ಭಕ್ತರ ಮೇಲೆ ಹದ್ದಿನ ಕಣ್ಣಿನ ನಿಗಾ ಇಡಲಾಗಿದೆ.ಹೀಗಾಗಿ ಶಬರಿಮಲೆಗೆ ಬರುವ ಭಕ್ತರ ಸಂಖ್ಯೆಯೂ ತೀವ್ರ ಕಡಿಮೆಯಾಗಿದ್ದು, ಮಂಡಲಪೂಜೆ ವೇಳೆ ಲಕ್ಷಾಂತರ ಭಕ್ತರಿಂದ ತುಂಬಿ ತುಳುಕುತ್ತಿದ್ದ ಶಬರಿಮಲೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ “ಖಾಲಿ ಖಾಲಿ’ ಎನಿಸುತ್ತಿದೆ. ವಾರಕ್ಕೆ ಕನಿಷ್ಠ 5 ಲಕ್ಷ ಭಕ್ತರ ದರ್ಶನವಾಗುತ್ತಿದ್ದ ಶಬರಿಮಲೆಯಲ್ಲಿ ಈ ವಾರ ಆ ಸಂಖ್ಯೆ ಎರಡು ಲಕ್ಷಕ್ಕೆ ಇಳಿದಿದೆ.

Advertisement

ಮಹಿಳೆಯರ ಪ್ರವೇಶ ವಿವಾದದ ಅನಂತರ ರಾತ್ರಿ ದೇವಾಲಯ ಆವರಣದಲ್ಲಿ ಭಕ್ತರು ಉಳಿಯಲು ಬಿಡದೆ ಭದ್ರತಾ ಪಡೆ ಜತೆ ಮಾತಿನ ಚಕಮಕಿ ಉಂಟಾಗಿ ಲಾಠಿ ಚಾರ್ಜ್‌ ನಡೆದ ಘಟನೆ ಭಕ್ತರನ್ನು ಘಾಸಿಗೊಳಿಸಿದ್ದು, ಅಲ್ಲಿನ ಪರಿಸ್ಥಿತಿ ಏನೋ.. ಹೇಗೋ… ಎಂಬ ಆತಂಕ ಇರುವುದರಿಂದ ಈ ವರ್ಷ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಅಯ್ಯಪ್ಪ ಮಾಲೆ ಹಾಕಲು ಭಕ್ತರು ಹಿಂದೇಟು ಹಾಕುತ್ತಿದ್ದಾರೆ.

ಮಕರ ಜ್ಯೋತಿ ವೇಳೆಗೆ ಆತಂಕ ನಿವಾರಣೆಯಾಗಿ ಭಕ್ತರ ಸಂಖ್ಯೆ ಹೆಚ್ಚಾಗಬಹುದು ಎಂದು ಅಯ್ಯಪ್ಪ ದೇವಾಲಯದ ಗುರುಸ್ವಾಮಿಗಳು ಅಭಿಪ್ರಾಯಪಡುತ್ತಾರೆ. ಅಯ್ಯಪ್ಪನಿಗೆ ತುಪ್ಪದ ಅಭಿಷೇಕ  ಈ ಹಿಂದೆ ಬೆಳಗ್ಗೆ 9 ಗಂಟೆಗೆ ಮುಗಿಯುತ್ತಿದಾರೂ ಇದೀಗ 12 ಗಂಟೆವರೆಗೂ ಸಮಯ ವಿಸ್ತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next