Advertisement

ಅಮಿತ್‌ ಶಾ ಹೋಮ್‌ ವರ್ಕ್‌ ಮಾಡಿಕೊಂಡು ಬರಲಿ 

06:55 AM Apr 21, 2018 | Team Udayavani |

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬೆಂಗಳೂರಿಗೆ ಬರುವ ಮೊದಲು ಹೋಮ್‌ ವರ್ಕ್‌ ಮಾಡಿಕೊಂಡು ಬರಲಿ ಎಂದು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಬೆಂಗಳೂರಿನಲ್ಲಿ ಯಾವುದೇ ಕೆಲಸ ಆಗಿಲ್ಲ ಎಂದು ಅಮಿತ್‌ ಶಾ ಮಾಹಿತಿ ಇಲ್ಲದೇ ಆರೋಪ ಮಾಡಿದ್ದಾರೆ.ನಗರದ ಸಬ್‌ಅರ್ಬನ್‌ ಯೋಜನೆಗೆ 17 ಸಾವಿರ ಕೋಟಿ ರೂ. ನೀಡಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. 

ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ಮೀಸಲಿಟ್ಟಿರುವುದು ಕೇವಲ ಒಂದು ಕೋಟಿ ರೂ. ಮಾತ್ರ ಎಂದು ತಿಳಿಸಿದರು.
ಬೆಂಗಳೂರು ದೇಶದ ಹೆಮ್ಮೆಯ ನಗರ. ನಗರದ ಬಗ್ಗೆ ಮಾತನಾಡುವ ಮೊದಲು ಅಧ್ಯಯನ ಮಾಡಿಕೊಂಡು ಮಾತನಾಡಿ ಎಂದ ಜಾರ್ಜ್‌, ಐದು ವರ್ಷದಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಸಾಕಷ್ಟು ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ.

ಮೆಟ್ರೋ ಯೋಜನೆಯನ್ನು ಯುಪಿಎ ಅವಧಿಯಲ್ಲಿ ಆರಂಭಿಸಲಾಗಿತ್ತು. ಮೊದಲ ಹಂತದ ಯೋಜನೆಯನ್ನು ಕಾಂಗ್ರೆಸ್‌ ಸರ್ಕಾರವೇ ಪೂರ್ಣಗೊಳಿಸಿದೆ ಎಂದರು.

ಸುನಾಮಿ ಜೀವ ತೆಗೆಯುತ್ತದೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬೆಂಗಳೂರಿಗೆ ಸುನಾಮಿಯಂತೆ ಬರುತ್ತಾರೆ ಎಂದು ಹೇಳುತ್ತಾರೆ. ಸುನಾಮಿ ಯಾರಿಗೂ ಒಳ್ಳೆಯದನ್ನು ಮಾಡಲು ಬರುವುದಿಲ್ಲ. ಅದು ಜನರ ಜೀವ ತೆಗೆಯಲು ಬರುತ್ತದೆ. ಕರ್ನಾಟಕದ ಜನತೆ ಅಷ್ಟೊಂದು ದಡ್ಡರಿಲ್ಲ ಎಂದರು.

Advertisement

ಸೂಟ್‌ ಹಣ ಎಲ್ಲಿ ಹೋಯ್ತು? ಸಿದ್ದರಾಮಯ್ಯ ದುಬಾರಿ ವಾಚ್‌ ಗಿಫ್ಟ್ ಪಡೆದಿದ್ದಾರೆ ಎಂದು ಅಮಿತ್‌ ಶಾ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ.

ಅಧಿಕಾರದಲ್ಲಿದ್ದಾಗ ಯಾವುದೇ ಮುಖ್ಯಮಂತ್ರಿಗೆ ಗಿಫ್ಟ್ ಬಂದರೆ ಅದನ್ನು ಅವರ ಅಧಿಕಾರ ಮುಗಿಯುವ ಸಂದರ್ಭದಲ್ಲಿ ಕ್ಯಾಬಿನೆಟ್‌ ಹಾಲ್‌ನಲ್ಲಿ ಇರಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದುಬಾರಿ ಸೂಟ್‌ ಒಂದನ್ನು ಉಡುಗೊರೆಯಾಗಿ ಪಡೆದಿದ್ದರು. ಆ ಸೂಟ್‌ ಮಾರಿದ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next