Advertisement

ಸಮ್ಮಿಶ್ರ ಸರ್ಕಾರಕ್ಕೆ ಸಮಸ್ಯೆ ಇಲ್ಲ: ಡಿಕೆಶಿ

11:52 PM Jul 08, 2019 | Lakshmi GovindaRaj |

ಬೆಂಗಳೂರು: “ಸರ್ಕಾರ ಹಾಗೂ ಪಕ್ಷದ ಹಿತದೃಷ್ಠಿಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇವೆ. ಆದರೆ, ಸರ್ಕಾರಕ್ಕೆ ಏನೂ ತೊಂದರೆ ಆಗುವುದಿಲ್ಲ’ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿ, “ಮುಂಬೈಗೆ ಹೋಗಿರುವ ಶಾಸಕರು ವಾಪಸ್‌ ಬರುತ್ತಾರೆ. ಅವರಿಗೆ ಸಚಿವರಾಗಬೇಕೆಂಬ ಆಸೆ ಇದೆ.

Advertisement

ಅವರಿಗೆ ಅವಕಾಶ ಸಿಗಲಿ. ನಾಗೇಶ್‌ ಕೂಡ ತಿರುಪತಿಗೆ ಹೋಗಿದ್ದಾರೆ. ಅವರೂ ನಮ್ಮೊಂದಿಗೆ ಬರುತ್ತಾರೆ. ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಐಟಿ, ಇಡಿಗಳನ್ನು ಬಿಟ್ಟು ಕೇಸ್‌ ಹಾಕಿದ್ದಾರೆ. ನನ್ನ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಲಾಗಿದೆ. ನಾನು ಹೆದರಿದ್ದೇನಾ’ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next