Advertisement

“ಸಹಕಾರಿ ಕ್ಷೇತ್ರ ಬಲಿಷ್ಠಕ್ಕೆ ಹೊಸಪೀಳಿಗೆ ಸೇರ್ಪಡೆ ಅವಶ್ಯ’

08:44 AM Nov 15, 2018 | Team Udayavani |

ಉಡುಪಿ: ಸಹಕಾರಿ ಕ್ಷೇತ್ರ ಬಲಿಷ್ಠವಾಗಬೇಕಾದರೆ ಹೊಸ ಪೀಳಿಗೆಯೊಂದಿಗೆ ಮುಂದುವರಿಯಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ಹೇಳಿದರು.

Advertisement

ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ ಮತ್ತು ಬಡಗಬೆಟ್ಟು ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಲಿ. ಆಶ್ರಯದಲ್ಲಿ ಬುಧವಾರ ಉಡುಪಿಯಲ್ಲಿ ನಡೆದ 65ನೇ ಅಖೀಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು. ಸಾಲಮನ್ನಾವನ್ನು ಸರಕಾರಗಳು ಸಹಕಾರಿ ಸಂಸ್ಥೆಗಳ ಮೂಲಕ ಮಾಡಿಸಿಕೊಳ್ಳುತ್ತವೆ. ಆದರೆ ಸಹಕಾರಿ ಕ್ಷೇತ್ರಕ್ಕೆ ನೀಡುವ ಕೊಡುಗೆ ಅತ್ಯಲ್ಪ. ಈ ಕ್ಷೇತ್ರ ಸ್ವಂತ ಶಕ್ತಿಯಿಂದ ಬೆಳೆದಿದೆ ಎಂದರು. ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರು ಆರ್‌ಐಸಿಎಂ ನಿವೃತ್ತ ನಿರ್ದೇಶಕ ಡಾ| ಎಸ್‌.ಎ. ಸಿದ್ಧಾಂತಿ ಅವರು ಸಹಕಾರ ಕ್ಷೇತ್ರದ ಮೂಲಕ ಕೃಷಿ ಉತ್ಪನ್ನ ಮಾರಾಟವಾದರೆ ಯೋಗ್ಯ ಬೆಲೆ ದೊರೆಯಲಿದೆ ಎಂದರು.  

ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ , ಹಿರಿಯ ಸಹಕಾರಿ ಕೃಷ್ಣರಾಜ ಸರಳಾಯ ಅವರನ್ನು ಸಮ್ಮಾನಿಸಲಾಯಿತು.
ಜಯಕರ ಶೆಟ್ಟಿ ಇಂದ್ರಾಳಿ ಪ್ರಸ್ತಾವಿಸಿದರು. ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಡಾ| ದೇವಿಪ್ರಸಾದ್‌ ಶೆಟ್ಟಿ, ರಮೇಶ್‌ ಶೆಟ್ಟಿ, ಎಸ್‌.ಕೆ.ಮಂಜುನಾಥ್‌, ಸಂಜೀವ ಕಾಂಚನ್‌, ಎಲ್‌.ಉಮಾನಾಥ, ಪ್ರವೀಣ್‌ ಬಿ.ನಾಯಕ್‌, ಚಂದ್ರಪ್ರತಿಮಾ ಎಂ.ಜೆ., ಪುರುಷೋತ್ತಮ ಶೆಟ್ಟಿ, ಅಶೋಕ್‌ ಕುಮಾರ್‌ ಶೆಟ್ಟಿ, ಮಾಸ್‌ ನಿರ್ದೇಶಕ ಶಿವಾಜಿ ಸುವರ್ಣ, ಅರುಣ್‌ ಕುಮಾರ್‌ ಎಸ್‌.ವಿ, ಪುರುಷೋತ್ತಮ ಎಸ್‌.ಪಿ ಉಪಸ್ಥಿತರಿದ್ದರು. ನವೀನ್‌ ಕೆ. ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next