Advertisement

Shirva: ಕಳತ್ತೂರು ಕಿಂಡಿ ಅಣೆಕಟ್ಟಿನಲ್ಲಿ ಸಿಕ್ಕಿಕೊಂಡ ಗಿಡ ಗಂಟಿ ತೆರವು

08:12 PM Aug 22, 2024 | Team Udayavani |

ಶಿರ್ವ: ಕುತ್ಯಾರು-ಕಳತ್ತೂರು ಗ್ರಾ.ಪಂ. ವ್ಯಾಪ್ತಿಯ ಕಳತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬಳಿ ಕಳತ್ತೂರು-ಪುಂಚಲಕಾಡು ಸಂಪರ್ಕ ಸೇತುವೆಯ ಕಿಂಡಿ ಅಣೆಕಟ್ಟಿನಲ್ಲಿ ಶೇಖರಣೆಗೊಂಡ ಬೃಹದಾ ಕಾರದ ಮರ, ಗಿಡ ಗಂಟಿಗಳನ್ನು ಗ್ರಾಮಸ್ಥರ ಸಹಕಾರ ದೊಂದಿಗೆ ಮಂಗಳವಾರ ತೆರವುಗೊಳಿಸಲಾಗಿದೆ.

Advertisement

ಅಣೆಕಟ್ಟಿನಲ್ಲಿ ಶೇಖರಣೆಗೊಂಡ ಮರಗಿಡ ಗಂಟಿಗಳಿಂದಾಗಿ ಹೊಳೆಯಲ್ಲಿ ನೆರೆ ನೀರು ಸರಾಗವಾಗಿ ಹರಿಯದೆ ಕಳತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಕೃಷಿ ಗದ್ದೆಗಳು ಜಲಾವೃತಗೊಂಡು ಕೃಷಿಗೆ ಹಾನಿ ಸಂಭವಿಸುತ್ತಿರುವ ಬಗ್ಗೆ ಆ. 2ರಂದು ವರದಿ ಪ್ರಕಟಿಸಿತ್ತು. ಕುತ್ಯಾರು ಗ್ರಾ.ಪಂ. ಅಧ್ಯಕ್ಷ ಜನಾರ್ದನ ಆಚಾರ್ಯ, ಪಿಡಿಒ ರಾಜೇಶ್‌ ಶೆಣೈ, ಗ್ರಾಮ ಆಡಳಿತ ಅಧಿಕಾರಿ ಪ್ರದೀಪ್‌, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾ.ಪಂ. ಸದಸ್ಯೆ ದಿವ್ಯಾ ಶೆಟ್ಟಿಗಾರ್‌ ಸ್ಥಳ ಪರಿಶೀಲನೆ ನಡೆಸಿದ್ದರು.

ಸ್ಥಳೀಯ ಕೃಷಿಕ ಬೆಂಗಳೂರಿನ ಉದ್ಯಮಿ ಪಚ್ಚಾಡಿ ಪ್ರಕಾಶ್‌ ಶೆಟ್ಟಿ ಅವರ ನೆರವಿನೊಂದಿಗೆ ಸ್ಥಳೀಯ ಕೃಷಿಕರಾದ ರವಿ ಶೆಟ್ಟಿಗಾರ್‌, ಯೋಗೀಶ್‌ ಶೆಟ್ಟಿಗಾರ್‌ ಮತ್ತು ವಾಲ್ಟಿಯವರ ಸಹಕಾರದೊಂದಿಗೆ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡಿರುವ ಮರ, ಗಿಡ ಗಂಟಿಗಳನ್ನು ತೆರವುಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next