Advertisement

ಪಂಚರಾಜ್ಯ ಫ‌ಲಿತಾಂಶ ಬಿಜೆಪಿಗೆ ಆತ್ಮಾವಕಲೋಕನದ ಸಂದೇಶ: ಶಿವ ಸೇನೆ

03:29 PM Dec 11, 2018 | Team Udayavani |

ಹೊಸದಿಲ್ಲಿ : ‘ಪಂಚ ರಾಜ್ಯಗಳ ಚುನಾವಣಾ ಫ‌ಲಿತಾಂಶ ಬಿಜೆಪಿಗೆ ಆತ್ಮಾವಕಲೋಕನ ಕೈಗೊಳ್ಳಬೇಕಾದ ಸ್ಪಷ್ಟ ಸಂದೇಶವನ್ನು ರವಾನಿಸಿದೆ’ ಎಂದು ಶಿವಸೇನೆ ಕಟುವಾಗಿ ಹೇಳಿದೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಶಿವ ಸೇನೆ ವಕ್ತಾರ, ಪಕ್ಷದ ರಾಜ್ಯ ಸಭಾ ಸದಸ್ಯ ಸಂಜಯ್‌ ರಾವತ್‌ ಅವರು ‘ಪಂಚರಾಜ್ಯ ಚುನಾವಣಾ ಫ‌ಲಿತಾಂಶದ ಮೂಲಕ ಬಿಜೆಪಿಯ ವಿಜಯ ರಥವನ್ನು ತಡೆಯಲಾಗಿರುವುದು ಸ್ಪಷ್ಟವಿದೆ’ ಎಂದು ಹೇಳಿದರು. 

‘ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಆಳುವ ಮೈತ್ರಿಕೂಟವು ಪಂಚರಾಜ್ಯ ಚುನಾವಣಾ ಫ‌ಲಿತಾಂಶಗಳ ಬಗ್ಗೆ ಆತ್ಮಾವಲೋಕನ ಮಾಡಬೇಕಾಗಿದೆ. ಅಂತಹ ಸ್ಪಷ್ಟ ಸಂದೇಶವನ್ನು ಮತದಾರರು ನೀಡಿದ್ದಾರೆ’ ಎಂದು  ರಾವತ್‌ ಹೇಳಿದರು. 

ಶಿವ ಸೇನೆ ಕೇಂದ್ರದಲ್ಲಿನ ಎನ್‌ಡಿಎ ಕೂಟದ ಮಿತ್ರ ಪಕ್ಷನಾಗಿರುವ ಹೊರತಾಗಿರುವ ಮಹಾರಾಷ್ಟ್ರದಲ್ಲಿ  ಆಳುವ ಬಿಜೆಪಿಯೊಂದಿಗಿನ ಅದರ ಸಂಬಂಧ ಹಳಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next