Advertisement

ಸ್ವಚ್ಛತಾ ರಾಯಭಾರಿಗಳಿಗೆ ಇಂದು ಪ್ರತಿಜ್ಞಾವಿಧಿ ಬೋಧನೆ 

11:41 AM Feb 09, 2018 | Team Udayavani |

ಮಂಗಳೂರು: ರಾಮಕೃಷ್ಣ ಮಿಷನ್‌ ವತಿಯಿಂದ ನಡೆಯುತ್ತಿರುವ ಸ್ವಚ್ಛ ಮಂಗಳೂರು ಕಾರ್ಯಕ್ರಮದ ಸ್ವಚ್ಛತಾ ರಾಯಭಾರಿಗಳಿಗೆ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮ ಫೆ. 9ರಂದು ಬೆಳಗ್ಗೆ 9.30ಕ್ಕೆ ರಾಮಕೃಷ್ಣ ಮಠದಲ್ಲಿ ನಡೆಯಲಿದೆ.

Advertisement

ಸ್ವಚ್ಛತಾ ಕಾರ್ಯಕ್ರಮದಲ್ಲಿ ಸ್ವಚ್ಛ ಮನಸ್ಸು ಅಭಿಯಾನ ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ 115 ಶಾಲೆಗಳಲ್ಲಿ ನಡೆಯುತ್ತಿದೆ. ಸುಮಾರು 12,000 ವಿದ್ಯಾರ್ಥಿಗಳು ಈ ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳ ಪೈಕಿ  ಸುಮಾರು  500 ಮಂದಿಯನ್ನು ಅವರ ಕಲಿಕೆ, ಆಸಕ್ತಿಯನ್ನು ಗಮನಿಸಿ ಸ್ವತ್ಛತಾ ರಾಯಭಾರಿಗಳು ಎಂದು ಆಯ್ಕೆ ಮಾಡಲಾಗಿದೆ. ಪ್ರತಿಜ್ಞಾವಿಧಿಯೊಂದಿಗೆ ಸ್ವಚ್ಛತೆ ಕುರಿತು ವಿಶೇಷ ಮಾಹಿತಿ ಶಿಬಿರವೂ ಈ ವೇಳೆ ಜರಗಲಿದೆ. “ಸ್ವಚ್ಛತಾ ಮಂಥನ’ ಕೈಪಿಡಿ  ಬಿಡುಗಡೆಗೊಳಿಸಲಾಗುವುದು ಎಂದು ವ್ಯವಸ್ಥಾಪಕ ಸ್ವಾಮಿ ಚಿದಂಬರಾನಂದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next