Advertisement

ಕಿಮ್ಸ್ ಶವಾಗಾರದಿಂದ ಚಂದ್ರಶೇಖರ ಗುರೂಜಿ ಮೃತದೇಹ ರವಾನೆ : ಮುಗಿಲು ಮುಟ್ಟಿದ ಆಕ್ರಂದನ

03:24 PM Jul 06, 2022 | Team Udayavani |

ಹುಬ್ಬಳ್ಳಿ: ಗುರೂಜಿ ಶವ ಪರೀಕ್ಷೆ ಮುಕ್ತಾಯಗೊಂಡಿದ್ದು, ಮೃತದೇಹವನ್ನು ಕಿಮ್ಸ್ ಶವಾಗಾರದಿಂದ ಗುರೂಜಿ ಜಮೀನಿಗೆ ತರಲಾಗುತ್ತಿದೆ.

Advertisement

ಗುರೂಜಿ ಮೃತದೇಹ ನೋಡುತ್ತಿದ್ದಂತೆ ಕುಟುಂಬದವರು ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ವೇಳೆ ವೈದಿಕರು ಪೂಜೆ ನೆರವೇರಿಸಿದರು. ಸಚಿವ ಶಂಕರ ಪಾಟೀಲ ಮುನೇನಕೊಪ್ಪ ‌ಅಂತಿಮ ದರ್ಶನ ಪಡೆದರು.

ಗುರೂಜಿ‌ ಪಾರ್ಥೀವ ಶರೀರವನ್ನು ವೈಕುಂಠ ರಥ ವಾಹನದ ಮೂಲಕ ಮೆರವಣಿಗೆ ಮೂಲಕ ಕೇಶ್ವಾಪುರ ಸುಳ್ಳ ರಸ್ತೆಯ ಗುರೂಜಿ ಜಮೀನಿಗೆ ರವಾನಿಸಲಾಯಿತು. ಕೆಲವೇ ಕ್ಷಣಗಳಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next