Advertisement

ಚಿಕ್ಕಮಗಳೂರು: ಪ್ಲಾಸ್ಟಿಕ್ ಸೇವಿಸಿ ಎರಡು ಹಸುಗಳು ಸಾವು

03:37 PM Feb 28, 2023 | Team Udayavani |

ಚಿಕ್ಕಮಗಳೂರು: ಪಂಚರತ್ನ ಯಾತ್ರೆಯಲ್ಲಿ ಉಳಿದ ಊಟ, ಪ್ಲಾಸ್ಟಿಕ್ ಸೇವಿಸಿ ಎರಡು ಹಸುಗಳು ಸಾವನಪ್ಪಿದ ಘಟನೆ ಕೊಪ್ಪ ತಾಲೂಕಿನ ವೈಕುಂಠಪುರ ಗ್ರಾಮದಲ್ಲಿ ನಡೆದಿದೆ.

Advertisement

ಮೂರು ದಿನದ ಪಂಚರತ್ನ ಯಾತ್ರೆ ಎಫೆಕ್ಟ್ ನಿಂದ ಹಸುಗಳು ಸಾವನಪ್ಪಿರುವುದಾಗಿ ರೈತರೊಬ್ಬರು ಆರೋಪಿಸಿದ್ದಾರೆ.

ಪಂಚರತ್ನ ಯಾತ್ರೆ ಸಂದರ್ಭ ಕುಮಾರಸ್ವಾಮಿ ವೈಕುಂಠಪುರದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಕುಮಾರಸ್ವಾಮಿಯ ಪಂಚರತ್ನ ಯಾತ್ರೆಯಲ್ಲಿ 2000 ಜನರಿಗೆ ಅಡುಗೆ ಮಾಡಿಸಿದ್ದು, 1000 ಜನ ಊಟ ಮಾಡಿದ್ದರು. ಉಳಿದಿದ್ದ ಊಟ, ಪ್ಲಾಸ್ಟಿಕ್ ಎಲ್ಲವನ್ನೂ ಕಾಡಿಗೆ ಬಿಸಾಡಿದ್ದರು. ಅನ್ನ, ಪ್ಲಾಸ್ಟಿಕ್ ಎಲ್ಲವನ್ನೂ ಹಸುಗಳು ತಿಂದಿರುವುದರ ಪರಿಣಾಮ ಸಾವು ಸಂಭವಿಸಿದೆ ಎಂದು ರೈತರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next