Advertisement

ವಾಹನ ಸವಾರರ ದೂರು: ಚೆರ್ಕಳ ವೃತ್ತ ತೆರವು

03:55 AM Dec 19, 2018 | Karthik A |

ವಿದ್ಯಾನಗರ: ನಾಡಿನ ಜನಸಂಖ್ಯೆ ಹೆಚ್ಚಾದಂತೆ ಮೂಲ ಸೌಕರ್ಯಗಳನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತವೆಯಾದರೂ ಕೆಲವೊಮ್ಮೆ ಅರ್ಧದಾರಿಯಲ್ಲೇ ಉಳಿದು ಕೈಗೆ ಬಂದದ್ದು ಬಾಯಿಗಿಲ್ಲದ ಪರಿಸ್ಥಿತಿ ಉಂಟಾಗುತ್ತದೆ. ಆಸಕ್ತಿಯಿಂದ ಕೈಗೊಂಡ ಅಭಿವೃದ್ಧಿ ಯೋಜನೆಗಳು ಕಡತಗಳಲ್ಲೇ ಉಳಿದು ಜನರಿಗೆ ಅನ್ಯಾಯವಾಗುವುದು ಕಂಡುಬರುತ್ತದೆ. ವ್ಯವಸ್ಥಿತವಲ್ಲದ ಯೋಜನೆಗಳಿಂದ ಉಂಟಾಗುವ ಸಮಸ್ಯೆಗಳು ಇನ್ನೊಂದೆಡೆ. ಇದಕ್ಕೊಂದು ಸ್ಪಷ್ಟ ಉದಾಹರಣೆ ಚೆರ್ಕಳ ವೃತ್ತ.

Advertisement

ಅವ್ಯವಸ್ಥಿತ ನಗರವಾಗಿದ್ದ ಚೆರ್ಕಳ ಪೇಟೆ ಸಮಸ್ಯೆಗಳ ಆಗರವಾಗಿದ್ದ ಸಂದರ್ಭದಲ್ಲಿ ಜನರ ಸತತ ಬೇಡಿಕೆಗೆ ಪ್ರತಿಫಲವೆಂಬಂತೆ ಸುಸಜ್ಜಿತ ಬಸ್ಸು ತಂಗುದಾಣ ನಿರ್ಮಿಸಲಾಯಿತು. ಮಾತ್ರವಲ್ಲದೆ ಪೇಟೆಯ ಹೃದಯಭಾಗದಲ್ಲಿ ಟ್ರಾಫಿಕ್‌ ವೃತ್ತ ಹಾಗೂ ತಮ್ಮ ವೈಯಕ್ತಿಕ ಅಗತ್ಯಗಳಿಗಾಗಿ ವಾಹನ ನಿಲುಗಡೆಗೊಳಿಸಲು ಅನುವಾಗುವಂತೆ ಹಿರಿದಾದ ವೃತ್ತವೊಂದನ್ನು ನಿರ್ಮಿಸಲಾಯಿತು. ಆದರೆ ಅನುಕೂಲಕ್ಕಾಗಿ ನಿರ್ಮಿಸಿದ ವೃತ್ತ ನಿರ್ಮಾಣ ಹಂತದಲ್ಲಿಯೇ ವಾಹನ ಚಾಲಕರ ಹಾಗೂ ಪ್ರಯಾಣಿಕರ ವಿರೋಧಕ್ಕೆ ಕಾರಣವಾಗಿತ್ತು.

ಪುನರ್‌ನಿರ್ಮಾಣ
ಇತ್ತೀಚೆಗೆ ಕಾಸರಗೋಡಿಗೆ ಆಗಮಿಸಿದ ಸಚಿವ ಜಿ.ಸುಧಾಕರನ್‌ ವೃತ್ತದ ಕಾಮಗಾರಿ ಪುನರಾರಂಭಿಸುವಂತೆ ಸೂಚಿಸಿದ್ದಾರೆ. ಇದಕ್ಕಾಗಿ 75 ಲಕ್ಷ ರೂ. ಮೊತ್ತವನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ. ಮೊತ್ತ ಬಿಡುಗಡೆಯಾದಲ್ಲಿ ಈ ಆರ್ಥಿಕ ವರ್ಷದಲ್ಲಿಯೇ ವೃತ್ತದ ಪುನರ್‌ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ.
-ಎನ್‌.ಎ. ನೆಲ್ಲಿಕುನ್ನು, ಕಾಸರಗೋಡು ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next