Advertisement

ಚೆನ್ನೈ, ನೆರೆಯ ಜಿಲ್ಲೆಗಳನ್ನು ಹೊರತು ಪಡಿಸಿ ಬಸ್‌ ಸಂಚಾರ ಆರಂಭ

05:37 PM May 31, 2020 | sudhir |

ಚೆನ್ನೈ: ಕೋವಿಡ್‌ ಹಾವಳಿಯಿಂದಾಗಿ ಸ್ಥಗಿತಗೊಂಡಿದ್ದ ಬಸ್‌ ಸಂಚಾರ ತಮಿಳುನಾಡಿನಲ್ಲಿ ಪುನರಾರಂಭಗೊಂಡಿದೆ. ಆದರೆ ಶೇ.50ರಷ್ಟು ಬಸ್‌ಗಳು ಮಾತ್ರ ಓಡಾಟ ಆರಂಭಿಸಿವೆ. ಚೆನ್ನೈ ಸೇರಿದಂತೆ ಸನಿಹದ ಮೂರು ಜಿಲ್ಲೆಗಳಲ್ಲಿ ಬಸ್‌ ಸಂಚಾರಕ್ಕೆ ಅನುಕೂಲ ಕಲ್ಪಿಸಿಲ್ಲ.
ಬಸ್‌ ಸಂಚಾರ ಇಲ್ಲದ ಜಿಲ್ಲೆಗಳಲ್ಲಿ ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚೆಂಗಲಪಟ್ಟು ಜಿಲ್ಲೆಗಳು ಸೇರಿವೆ.
ಇನ್ನು ಬಸ್‌ಗಳಲ್ಲಿ ಶೇ.60ರಷ್ಟು ಪ್ರಯಾಣಿಕರನ್ನು ಮಾತ್ರ ಕೂರಿಸಬಹುದು ಎಂದು ಸರಕಾರ ಆದೇಶಿಸಿದೆ. ಇದರೊಂದಿಗೆ ಇಡೀ ರಾಜ್ಯವನ್ನು 8 ವಲಯನಗಳನ್ನಾಗಿ ಗುರುತಿಸಲಾಗಿದೆ ಇದರಲ್ಲಿ 7 ಮತ್ತು 8ನೇ ವಲಯಗಳಲ್ಲಿ ಯಾವುದೇ ಸಾರ್ವಜನಿಕ ಸಾರಿಗೆ ಓಡಾಟಕ್ಕೆ ಅನುಮತಿ ಇರುವುದಿಲ್ಲ.
ಇದರೊಂದಿಗೆ ಖಾಸಗಿ ಬಸ್‌ಗಳಿಗೂ ಓಡಾಟಕ್ಕೆ ಅನುಮತಿ ಕಲ್ಪಿಸಲಾಗಿದೆ. ವಲಯಗಳ ಮಧ್ಯೆ ಓಡಾಟಕ್ಕೆ ಯಾವುದೇ ಪಾಸ್‌ಗಳ ಅಗತ್ಯವಿಲ್ಲ. ಆದರೆ ಅಂತರ್‌ ಜಿಲ್ಲೆ, ಅಂತರ್‌ ರಾಜ್ಯ ಓಡಾಟಕ್ಕೆ ಇ ಪಾಸ್‌ಗಳನ್ನು ಪಡೆಯುವುದು ಕಡ್ಡಾಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next