Advertisement

Char Dham ಯಾತ್ರೆ; ಸಿಲುಕಿಕೊಂಡಿರುವ ಹಾವೇರಿಯ ಏಳು ಜನ ಯಾತ್ರಿಕರು

11:37 PM Jul 11, 2024 | Team Udayavani |

ಹಾವೇರಿ: ಚಾರ್‌ಧಾಮ್‌ ಯಾತ್ರೆಗೆ ತೆರಳಿದ್ದ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದ ಏಳು ಜನ ಯಾತ್ರಿಕರು ಬದರೀನಾಥ್‌ದಲ್ಲಿ ಭಾರೀ ಮಳೆಯಿಂದ ಭೂಕುಸಿತಗೊಂಡು ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ಸಿಲುಕಿಕೊಂಡಿರುವ ಘಟನೆ ನಡೆದಿದೆ.

Advertisement

ಸಂಪರ್ಕ ಕಡಿತದಿಂದ ಬದರೀನಾಥದಲ್ಲಿ ಸಾವಿರಾರು ಯಾತ್ರಿಕರು ಸಿಲುಕಿಕೊಂಡಿದ್ದು, ಅವರಲ್ಲಿ ಕನ್ನಡಿಗರೂ ಸೇರಿದ್ದಾರೆ. ಕಳೆದ ಕೆಲವು ದಿನಗಳಿಂದ ಆ ಭಾಗದಲ್ಲಿ ಮಳೆಯಾಗಿದ್ದರಿಂದ ಭೂಕುಸಿತವಾಗಿದೆ. ಇದರಿಂದ ಸಂಪರ್ಕ ಕಡಿತಗೊಂಡು ಕೇದಾರನಾಥನ ದರ್ಶನಕ್ಕೆ ತೆರಳಿದ್ದ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದ 7 ಜನರ ತಂಡ ಸಿಲುಕಿಕೊಂಡಿದೆ.

ಶ್ರೀಧರ ಹೊಳಲಕೇರಿ (62), ಪತ್ನಿ ಶಾಂತಾ ಹೊಳಲಕೇರಿ (57), ಅಶೋಕ ವಿ. ಎಸ್‌. (61), ಭಾರತಿ ಎ.ಎಸ್‌.(55), ವೆಂಕಟೇಶ ಪಂಪನ್‌ (62), ರಾಜೇಶ್ವರಿ ಪಂಪನ್‌ (60), ರಾಹುಲ್‌ ಪಂಪನ್‌ (35) ಬದರಿಯಲ್ಲಿ ಸಿಲುಕಿಕೊಂಡಿರುವ ಯಾತ್ರಿಗಳು.ಆದರೆ, ಯಾವುದೇ ಅಪಾಯವಾಗದೇ ಸುರಕ್ಷಿತ ಸ್ಥಳದಲ್ಲಿ ತಂಗಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next