Advertisement

Channapatna: 2 ಜಡೆ ಹಾಕದ ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಅತಿಥಿ ಶಿಕ್ಷಕಿ!

11:25 AM Jul 28, 2024 | Team Udayavani |

ಚನ್ನಪಟ್ಟಣ: ಶಾಲೆಗೆ ಶಿಸ್ತಾಗಿ ಎರಡು ಜಡೆ ಹಾಕಿಕೊಂಡು ಬಂದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕಿಯೊಬ್ಬರು ಮೂವರು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಘಟನೆ ತಾಲೂಕಿನ ಅರಳಾಳುಸಂದ್ರ ಸರಕಾರಿ ಶಾಲೆಯಲ್ಲಿ ಶುಕ್ರವಾರ ನಡೆದಿದೆ.

Advertisement

ಎಂಟನೇ ತರಗತಿಯ ಮೂವರು ವಿದ್ಯಾ ರ್ಥಿನಿಯರು ಎರಡು ಜಡೆ ಹಾಕಿಕೊಂಡು ಶಾಲೆಗೆ ಬಾರದ್ದಕ್ಕೆ ಅತಿಥಿ ಶಿಕ್ಷಕಿ ಪವಿತ್ರಾ ಅವರು ಮೊತ್ತೋರ್ವ ಅತಿಥಿ ಶಿಕ್ಷಕನಿಗೆ ಹೇಳಿ ಜಡೆ ಕತ್ತರಿಸಿದ್ದಾರೆಂದು ಮುಖ್ಯಶಿಕ್ಷಕ ಶಿವಕುಮಾರ್‌ ಆರೋಪಿಸಿದ್ದಾರೆ.

ಆಕ್ರೋಶಗೊಂಡ ಪೋಷಕರು ಶಾಲೆಗೆ ಬಂದು ಗಲಾಟೆ ಮಾಡಿದ್ದು, ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಹಾಗೂ ಬಿಇಒ ಮರೀಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪವಿತ್ರಾ ಹಾಗೂ ಮತ್ತೂಬ್ಬ ಅತಿಥಿ ಶಿಕ್ಷಕ ಶ್ರೀನಿವಾಸ್‌ ಅವರನ್ನು ಬಿಇಒ ಮರೀಗೌಡ ಸೇವೆಯಿಂದ ವಜಾ ಮಾಡಿದ್ದು, ಮುಖ್ಯಶಿಕ್ಷಕ ಶಿವಕುಮಾರ್‌ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಅತಿಥಿ ಶಿಕ್ಷಕಿ ಪವಿತ್ರ ಅದೇ ಶಾಲೆಯ ಪ್ರಾಂಶುಪಾಲ ದೊಡ್ಡಕಾಳಯ್ಯ ಅವರ ಪತ್ನಿ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next