Advertisement

ಗಾಲಿ ಜನಾರ್ಧನರೆಡ್ಡಿ ಬೆಂಬಲಿಸಿ ಬಿಜೆಪಿ ಎಸ್ಟಿಮೋರ್ಚಾ ಪದವಿಗೆ ಚಂದ್ರಶೇಖರ ನಾಯಕ ರಾಜೀನಾಮೆ

09:09 PM Jan 02, 2023 | Team Udayavani |

ಗಂಗಾವತಿ:ತೀವ್ರ ಕುತೂಹಲ ಕೆರಳಿಸಿರುವ ಮಾಜಿ ಸಚಿವ ಗಾಲಿ ಜನಾರ್ಧನರಡ್ಡಿಯವರನ್ನು ಬೆಂಬಲಿಸಲು ಬಿಜೆಪಿ ಕೊಪ್ಪಳ ಜಿಲ್ಲಾ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯತ್ವಕ್ಕೆ ಚಂದ್ರಶೇಖರ ನಾಯಕ ರಾಜೀನಾಮೆ ಸಲ್ಲಿಸಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

Advertisement

ಬಿಜೆಪಿ ಎಸ್ಟಿ ರಾಜ್ಯಾಧ್ಯಕ್ಷ ರಾಜಾ ಶರತ್ ಚಂದ್ರ ನಾಯಕ ಇವರಿಗೆ ಪತ್ರ ಬರೆದು ದಕ್ಷಿಣ ಭಾರತದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ಗಾಲಿ ಜನಾರ್ಧನರಡ್ಡಿ ಕಾರಣರಾಗಿದ್ದಾರೆ.

ಇವರನ್ನು ಬಿಜೆಪಿ ಸರಿಯಾಗಿ ನಡೆಸಿಕೊಂಡಿಲ್ಲ. ಇದರಿಂದಾಗಿ ಬೇಸರದಲ್ಲಿ ರೆಡ್ಡಿಯವರು ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸ್ಥಾಪಿಸಿದ್ದು ಮುಂದಿನ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಗಂಗಾವತಿ ಕ್ಷೇತ್ರದಲ್ಲಿ ಗಾಲಿ ಜನಾರ್ಧನರಡ್ಡಿ ಅವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು ಅವರ ಗೆಲುವಿಗಾಗಿ ನಮ್ನ ಸಂಗಾತಿಗಳ ಜತೆ ಕೆಲಸ ಮಾಡುವುದಾಗಿ ಚಂದ್ರಶೇಖರ ನಾಯಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next