Advertisement

ಹುಷಾರ್‌, ಎಲ್ರ ಕಾಲೆಳಿಯತ್ತೆ ಕಾಲ!

12:38 PM Feb 05, 2022 | Team Udayavani |

“ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸಿನಿಮಾ ಬಳಿಕ ನಿರ್ದೇಶಕ ಸುಜಯ್‌ ಶಾಸ್ತ್ರಿ ಹೊಸ ಸಿನಿಮಾ ಮಾಡಲು ಹೊರಟಿದ್ದಾರೆ. ಆ ಸಿನಿಮಾಕ್ಕೆ ಅವರಿಟ್ಟ ಹೆಸರು “ಎಲ್ರ ಕಾಲೆಳಿಯತ್ತೆ ಕಾಲ’. ಇತ್ತೀಚೆಗೆ ಈ ಚಿತ್ರದ ಮುಹೂರ್ತ ನಡೆಯಿತು.

Advertisement

ಮುಹೂರ್ತ ಬಳಿಕ ಮಾತನಾಡಿದ ಚಿತ್ರದ ನಿರ್ದೇಶಕ ಸುಜಯ್‌ ಶಾಸ್ತ್ರಿ, “ನಿರ್ಮಾಪಕರಲ್ಲಿ ಒಂದು ಸಿನಿಮಾ ಮಾಡುವುದರ ಕುರಿತು ಸದಾ ಹೇಳುತ್ತಿದ್ದೆ. ಕಥೆ ಕೇಳಿದ ಕೂಡಲೇ ಸಿನಿಮಾ ಮಾಡಲು ಒಪ್ಪಿಕೊಂಡರು. ಇಲ್ಲಿ ರಂಗಭೂಮಿಯ ದೊಡ್ಡ ತಂಡ ಒಟ್ಟಾಗಿರೋದು ಸಂತಸದ ವಿಚಾರ. ನಿರ್ಮಾಪಕರಿಗೂ ಅದು ಖುಷಿ ತಂದಿದೆ. ವಿಳಂಬ ಮಾಡದೇ ಚಿತ್ರವನ್ನು ಬೇಗ ಶೂಟಿಂಗ್‌ ಮುಗಿಸುವ ಪ್ರಯತ್ನ ನಮ್ಮದು’ ಎಂದರು.

ಇದನ್ನೂ ಓದಿ:ಹೆಣ್ಣುಮಕ್ಕಳ ಮುಖ ನೋಡುವ ಆಸೆ ಯಾಕೆ?: ಹಿಜಾಬ್ ವಿವಾದದ ಕುರಿತು ಸಿ.ಎಂ‌.ಇಬ್ರಾಹಿಂ

ಪಾರ್ಟಿ ಸಾಂಗ್‌ಗಳಿಗೆ ಫೇಮಸ್‌ ಆಗಿದ್ದ ರ್ಯಾಪರ್‌, ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ಇದೇ ಮೊದಲ ಬಾರಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. “ಇಲ್ಲಿವರೆಗೆ ಸಂಗೀತ ನಿರ್ದೇಶಕ, ರ್ಯಾಪರ್‌ ಆಗಿದ್ದೆ. ಈಗ ಸಿನಿಮಾ ಎಂಬ ಮಹಾಸಾಗರಕ್ಕೆ ನಾಯಕನಾಗಿ ಧುಮುಕುತ್ತಾ ಇದ್ದೇನೆ. ಇದಕ್ಕೆ ಎಲ್ಲರ ಸಾಥ್‌ ಹಾಗೂ ಆರ್ಶೀವಾದ ಇರಲಿ. ಚಿತ್ರದಲ್ಲಿ ನನ್ನದು 80-90 ದಶಕದ ಓರ್ವ ಪ್ರಾಧ್ಯಾಪಕನ ಪಾತ್ರ ಇಷ್ಟು ಬಿಟ್ಟು ಮತ್ತೇನು ಹೇಳಲಾರೆ’ ಎಂದರು.

ಗೋವಿಂದರಾಜು ಈ ಚಿತ್ರದ ನಿರ್ಮಾಪಕ. ಹಿರಿಯ ನಟಿ ತಾರಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next