Advertisement

ಐಸಿಐಸಿಐ ಬ್ಯಾಂಕ್‌ ಬಿಟ್ಟ ಕೊಚ್ಚಾರ್‌, ಸಂದೀಪ್‌ ಬಕ್ಷಿ ನೂತನ MD,CEO

03:19 PM Oct 04, 2018 | udayavani editorial |

ಹೊಸದಿಲ್ಲಿ : ತತ್‌ಕ್ಷಣದಿಂದ ಜಾರಿಗೆ ಬರುವಂತೆ ಚಂದಾ ಕೊಚ್ಚಾರ್‌ ಐಸಿಐಸಿಐ ಬ್ಯಾಂಕ್‌ ಬಿಟ್ಟಿದ್ದು ಸಂದೀಪ್‌ ಬಕ್ಷಿ  ನೂತನ ಎಂ ಡಿ ಮತ್ತು ಸಿಇಓ ಆಗಿದ್ದಾರೆ ಎಂದು ಐಸಿಐಸಿ ಬ್ಯಾಂಕ್‌ ಹೇಳಿದೆ.

Advertisement

ವಿಡಿಯೋಕಾನ್‌ ಸಾಲ ಕ್ಕೆ ಸಂಬಂಧಿಸಿದಂತೆ ಚಂದಾ ಕೊಚ್ಚಾರ್‌ ಅವರು ಬಾಹ್ಯ ತನಿಖೆಯನ್ನು ಎದುರಿಸುತ್ತಿದ್ದಾರೆ. ಕೊಚ್ಚಾರ್‌ ಮತ್ತು ಅವರ ಕುಟುಂಬ ಸದಸ್ಯರು ‘ ಕೊಡು-ಕೊಳೆ ‘ಯ ಆರೋಪ ಎದುರಿಸುತ್ತಿದ್ದಾರೆ ಮತ್ತು ವಿಡಿಯೋಕಾನ್‌ ಸಮೂಹಕ್ಕೆ ಸಾಲ ನೀಡಿರುವ ವಿಷಯದಲ್ಲಿ ವಿರೋಧಾತ್ಮಕ ಹಿತಾಸಕ್ತಿಯ ಆರೋಪಕ್ಕೂ ಗುರಿಯಾಗಿದ್ದಾರೆ. 

ಬಕ್ಷಿ ಅವರ ನೇಮಕಾತಿಯು ಐದು ವರ್ಷಗಳ ಅವಧಿಯದ್ದಾಗಿದ್ದು 2023ರ ಅ.3ರಂದು ಅದು ಕೊನೆಗೊಳ್ಳಲಿದೆ ಎಂದು ಬಿಎಸ್‌ಇ ಯಲ್ಲಿ ಸಲ್ಲಿಸಿರುವ ದಾಖಲೆ ಪತ್ರದಲ್ಲಿ ಐಸಿಐಸಿಐ ಹೇಳಿದೆ. 

ಕೊಚ್ಚಾರ್‌ ಅವರು 2018ರ ಮೇ 30ರಂದೇ ತನ್ನ ವಿರುದ್ಧದ ತನಿಖೆ ಮುಗಿಯುವ ವರೆಗಿನ ಅವಧಿಯ ವರೆಗೆ ರಜೆಯಲ್ಲಿ ತೆರಳಿದ್ದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next