Advertisement

Mysore: ವಿಜೃಂಭಣೆಯ ಚಾಮುಂಡೇಶ್ವರೀ ದೇವಿ ರಥೋತ್ಸವ

11:03 PM Oct 26, 2023 | Team Udayavani |

ಮೈಸೂರು: ವಿಜಯದಶಮಿಯ ಬಳಿಕ ಚಾಮುಂಡಿಬೆಟ್ಟದಲ್ಲಿ ಗುರು ವಾರ ನಾಡದೇವತೆ ಶ್ರೀ ಚಾಮುಂಡೇಶ್ವರೀ ದೇವಿಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

Advertisement

ಗುರುವಾರ ಬೆಳಗ್ಗೆ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಶ್ರೀ ಚಾಮುಂಡೇಶ್ವರೀ ದೇವಿಗೆ ಪೂಜೆ ಸಲ್ಲಿಸಿದರು. ಅನಂತರ ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಚಾಮುಂಡೇಶ್ವರೀ ದೇವಿಯ ಉತ್ಸವಮೂರ್ತಿಯುಳ್ಳ ರಥೋತ್ಸವ ಆರಂಭವಾಗುತ್ತಿದ್ದಂತೆ ಪೊಲೀಸರು ಸಂಪ್ರದಾಯದಂತೆ 21 ಕುಶಾಲತೋಪು ಸಿಡಿಸಿ ತಾಯಿ ಚಾಮುಂಡೇಶ್ವರೀ ದೇವಿಗೆ ಗೌರವ ಸಲ್ಲಿಸಿದರು. ತಾಯಿ ಚಾಮುಂಡೇಶ್ವರಿಯ ತೇರು ದೇವಸ್ಥಾನವನ್ನು ಒಂದು ಸುತ್ತು ಹಾಕಿತು. ಸಾವಿರಾರು ಭಕ್ತರು ಶ್ರೀ ಚಾಮುಂಡೇಶ್ವರೀ ದೇವಿಗೆ ಜೈಕಾರ ಹಾಕಿ, ರಥವನ್ನು ಎಳೆದು ಪುನೀತರಾದರು.

Advertisement

Udayavani is now on Telegram. Click here to join our channel and stay updated with the latest news.

Next