Advertisement

ಅಧಿವೇಶನಕ್ಕೆ ಸವಾಲು

12:35 AM Jan 27, 2021 | Team Udayavani |

ಬೆಂಗಳೂರು: ರೈತರ ಪ್ರತಿಭಟನೆ, ಹುಣಸೋಡು ಸ್ಫೋಟ, ಕೆಪಿಎಸ್‌ಸಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ, ಸಂಪುಟ ವಿಸ್ತರಣೆ ಮತ್ತು ಖಾತೆಗಾಗಿ ಹಗ್ಗ ಜಗ್ಗಾಟಗಳ ನಡುವೆ ಗುರುವಾರ ರಾಜ್ಯ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದೆ. ಸರಕಾರದ ಮೇಲೆ ಮುಗಿಬೀಳಲು ವಿಪಕ್ಷಗಳು ಸಜ್ಜಾಗುತ್ತಿದ್ದರೆ, ತಿರುಗೇಟು ನೀಡಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ.

Advertisement

7 ದಿನ ನಡೆಯಲಿರುವ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿ ಅನುಮೋದನೆ ಪಡೆಯಬೇಕಿದೆ. ಲವ್‌ ಜೆಹಾದ್‌ ಕಾನೂನು ಪ್ರಸ್ತಾವದ ಸಾಧ್ಯತೆಯೂ ಇದೆ. ಹೀಗಾಗಿ ವರ್ಷದ ಮೊದಲ ಅಧಿವೇಶನ ವಾಕ್ಸಮರ – ಕೋಲಾಹಲಕ್ಕೆ ಸಾಕ್ಷಿಯಾಗಬಹುದು.

ವಿಧಾನಪರಿಷತ್‌ನ ಉಪ ಸಭಾಪತಿ ಚುನಾವಣೆಯೂ ನಿಗದಿಯಾಗಿದೆ. ವಿಧಾನಪರಿಷತ್‌ನಲ್ಲಿ ನಡೆದ ಕಹಿ ವಿದ್ಯಮಾನಗಳ ಕುರಿತು ಸದನ ಸಮಿತಿ ವರದಿ ಸಲ್ಲಿಸಿದೆ. ವರದಿ ಮಂಡನೆಯಾದರೆ ಪರಿಷತ್‌ನಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಬಹುದು.

60 ದಿನ ಕಲಾಪ? :

ವರ್ಷಕ್ಕೆ 60 ದಿನ ಅಧಿವೇಶನ ನಡೆಸಬೇಕು ಎಂದು ತೀರ್ಮಾನ ಮಾಡಲಾಗಿದ್ದರೂ 2002ರಿಂದ ಇದು ವರೆಗೆ ಅಷ್ಟು ದಿನ ನಡೆದೇ ಇಲ್ಲ. ಈ ವರ್ಷವಾದರೂ 60 ದಿನ ಅಧಿವೇಶನ ನಡೆಯುತ್ತದೆಯೇ ಎಂಬ ಪ್ರಶ್ನೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next